ಸರಸ್ವತಿ ಕೋ-ಆಪರೇಟಿವ್ ಸಹಕಾರಿ ಸಂಘದ ಅಧ್ಯಕ್ಷ ಎಸ್.ಆರ್ ಸತೀಶ್ಚಂದ್ರ ಗೌರಿಪುರಂ ಭೇಟಿ

0

ನಿರ್ಮಾಣ ಹಂತದಲ್ಲಿರುವ ಬೆಳ್ಳಾರೆಯ ಗೌರಿಪುರಂ ಶ್ರೀ ರಾಜರಾಜೇಶ್ವರಿ ಕ್ಷೇತ್ರಕ್ಕೆ ಸರಸ್ವತಿ ಕೋ-ಆಪರೇಟಿವ್ ಸಹಕಾರಿ ಸಂಘದ ಅಧ್ಯಕ್ಷ ಹಾಗೂ ಮೋಂತಿಮಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಎಸ್.ಆರ್ ಸತೀಶ್ಚಂದ್ರ ಜು. 4ರಂದು ಭೇಟಿ ನೀಡಿದರು.

ಈ ಸಂದರ್ಭದಲ್ಲಿ ನಿವೃತ್ತ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಜಯಂತ್ ನಾಯ್ಕ್ ಕುಂಡೇರಿ, ಪುರೋಹಿತ ಜಯರಾಮ ಭಟ್, ಮಹಾಲಕ್ಷ್ಮಿ ಬೋರ್ ವೆಲ್ಸ್ ಮಾಲಕ ಸಂಜೀವ ನಾಯಕ್, ಪಿ.ಡಬ್ಲೂ.ಡಿ ಗುತ್ತಿಗೆದಾರ ನವೀನ್ ಸುಳ್ಳಿ, ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ನಾಯಕ್ ಪೊಸವಳಿಗೆ ಪಂಜಿಗಾರು, ಪದಾಧಿಕಾರಿಗಳಾದ ಜಗದೀಶ್ ರೈ ತಂಬಿನಮಕ್ಕಿ, ನಾಗಪ್ಪ ಕುಲಾಲ್ ಪನ್ನೆ, ರಮೇಶ್ ನಾಯಕ್ ಪನ್ನೆ, ಹರೀಶ್ ನಾಯಕ್ ಗೌರಿಪುರಂ, ನವೀನ್ ಕುಮಾರ್ ಗೌರಿಪುರಂ ಉಪಸ್ಥಿತರಿದ್ದರು.