ಭಾಸ್ಕರ ಬೆಳ್ಚಪ್ಪಾಡ ಮಹಾಬಲಡ್ಕ ನಿಧನ

0

ಜಾಲ್ಸೂರು ಗ್ರಾಮದ ಮಹಾಬಲಡ್ಕ ಭಾಸ್ಕರ ಬೆಳ್ಚಪ್ಪಾಡ ಅವರು ಅಲ್ಪಕಾಲದ ಅಸೌಖ್ಯದಿಂದಾಗಿ ಜು. 5ರಂದು ರಾತ್ರಿ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 72 ವರ್ಷ ವಯಸ್ಸಾಗಿತ್ತು.

ಭಾಸ್ಕರ ಬೆಳ್ಚಪ್ಪಾಡ ಅವರು ಜಾಲ್ಸೂರಿನಲ್ಲಿ ಕಳೆದ ನಲವತ್ತು ವರ್ಷಗಳಿಂದ ವಿಷ್ಣುಭವನ ಎಂಬ ಹೋಟೆಲ್ ನಡೆಸುತ್ತಿದ್ದು, ಇತ್ತೀಚಿನವರೆಗೂ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದರು. ಇವರು ವಿಷ್ಣುಮೂರ್ತಿ ದೈವದ ದರ್ಶನ ಪಾತ್ರಿಯಾಗಿಯೂ ಈ ಹಿಂದೆ ಸೇವೆ ಸಲ್ಲಿಸಿದ್ದರು.

ಮೃತರು ಪತ್ನಿ ಯಶೋದ, ಪುತ್ರರಾದ ನವೀನ್ ಕುಮಾರ್ ಮಹಾಬಲಡ್ಕ, ವಿನೋದ್ ಕುಮಾರ್ ಮಹಾಬಲಡ್ಕ, ಪುತ್ರಿ ಶ್ರೀಮತಿ ಚಿತ್ರ ಮಹಾಬಲಡ್ಕ, ಸಹೋದರರು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.