ಸುಳ್ಯ ನಲಿಕೆ ಸೇವಾ ಸಮಾಜ ಸಂಘದ ವಾರ್ಷಿಕ ಮಹಾಸಭೆ- ನೂತನ ಪದಾಧಿಕಾರಿಗಳ ಆಯ್ಕೆ

0

ಸುಳ್ಯ ತಾಲೂಕು ನಲಿಕೆ ಸೇವಾ ಸಮಾಜ ಸಂಘದ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ರೋಶನ್ ಸರಳಿಕುಂಜ ರವರ ಅಧ್ಯಕ್ಷತೆಯಲ್ಲಿ ಜು.5 ರಂದು ಅರಂಬೂರು ಮೂಕಾಂಬಿಕಾ ಭಜನಾ ಮಂದಿರದವಠಾರದಲ್ಲಿ‌ ನಡೆಯಿತು.

ಮುಂದಿನ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ಸಂಘದ ಗೌರವಾಧ್ಯಕ್ಷ ಬಾಬು ಅಜಿಲ ಅರಂಬೂರು ರವರು ನಡೆಸಿಕೊಟ್ಟರು.


ನೂತನ ಅಧ್ಯಕ್ಷ ಶಿವರಾಮ ಕನಕಮಜಲು, ಉಪಾಧ್ಯಕ್ಷ ವಿಜಿತ್ ಮಂಡೆಕೋಲು, ಕಾರ್ಯದರ್ಶಿ ವಿನೋದ್ ಅರಂಬೂರು, ಜತೆ ಕಾರ್ಯದರ್ಶಿ ಸುರೇಶ್ ಬಾಳಿಲ, ಕೋಶಾಧಿಕಾರಿ ಅನಿಲ್ ಕನಕಮಜಲು ರವರನ್ನುಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಬಾಬು ಬಾಳಿಲ, ಕಿಟ್ಟು ಅಜಿಲ ಅಡ್ತಲೆ, ಮನೋಹರ ಪಂಜಿಗಾರು, ಸತೀಶ್ ಪಂಜಿಗಾರು, ಗೋಪಾಲ ಬಾಳಿಲ,ಗೌತಮ್ ಅಡ್ತಲೆ, ಸುದರ್ಶನಪುರುಷರಕಟ್ಟೆ,ಐತ್ತಪ್ಪ ಬಾಳಿಲ,ನಾಗೇಶ್ ಬಾಳಿಲ ಉಪಸ್ಥಿತರಿದ್ದರು.