ಚೆಂಬು ಬಿಜೆಪಿ ಶಕ್ತಿಕೇಂದ್ರದ ವತಿಯಿಂದ ಡಾ. ಶ್ಯಾಮ್ ಪ್ರಸಾದ್ ಮುಕರ್ಜಿ ಬಲಿದಾನ ಸಪ್ತಾಹ

0

ಚೆಂಬು ಗ್ರಾಮದ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಊರುಬೈಲು ಬೂತ್ ನಲ್ಲಿ ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಜೀವನ ಮತ್ತು ಬಲಿದಾನ ಸಪ್ತಾಹ ಕಾರ್ಯಕ್ರಮವು ನಡೆಯಿತು.

ಬಿಜೆಪಿ ಬೂತ್ ಸಮಿತಿ ಅದ್ಯಕ್ಷ ಹರೀಶ್ ಊರುಬೈಲು ಅಧ್ಯಕ್ಷತೆ ವಹಿಸಿದ್ದರು. ಡಾ. ಮುಖರ್ಜಿರವರ ಭಾವಚಿತ್ರಕ್ಕೆ ದೀಪ ಬೆಳಗುವ ಮೂಲಕ ಸಂಪಾಜೆ ಪಯಸ್ವಿನಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎನ್.ಸಿ. ಅನಂತ್ ಊರುಬೈಲು ಅವರು ಮುಖರ್ಜಿ ಅವರ ಜೀವನ ,ಆದರ್ಶ ಮತ್ತು ಬಲಿದಾನದ ಮಹತ್ವದ ಕುರಿತು ಮಾತನಾಡಿದರು.


ಬಳಿಕ ಕಾರ್ಯಕ್ರಮದ ಅಂಗವಾಗಿ ಗಿಡ ನೆಡುವ ಕಾರ್ಯ ಕೈಗೊಳ್ಳಲಾಯಿತು.
ಈ ಸಂದರ್ಭದಲ್ಲಿ ಬೂತ್ ನ ಸಹ ಸಂಚಾಲಕ ರಾಘವ ಮಾರ್ಪಡ್ಕ , ಗ್ರಾ ಪಂ ಸದಸ್ಯರಾದ ವಸಂತ್ ಊರುಬೈಲು ,ರಮೇಶ್ ಹುಲ್ಲುಬೆಂಕಿ ಮತ್ತು ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರ