ಕನಕಮಜಲು: ಪಂಜಿಗುಂಡಿಯ ಅಂಗವಿಕಲ ಯುವಕನಿಗೆ ಗ್ರಾ.ಪಂ. ವತಿಯಿಂದ ಗಾಲಿಕುರ್ಚಿ ಕೊಡುಗೆ

0

ಕನಕಮಜಲು ಗ್ರಾಮದ ಪಂಜಿಗುಂಡಿಯಲ್ಲಿ ಅಂಗವಿಕಲ ಯುವಕ ಯತೀಶ್ ಅವರಿಗೆ ಗ್ರಾ.ಪಂ. ವತಿಯಿಂದ ಗಾಲಿಕುರ್ಚಿಯನ್ನು ಜು.11ರಂದು ವಿತರಿಸಲಾಯಿತು.

ಯತೀಶ್ ಅವರು ಈ ಹಿಂದೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಅಡಿಕೆ ಮರ ಬೆನ್ನಿಗೆ ಬಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರೂ, ಶಾಶ್ವತ ಅಂಗವಿಕಲತೆಗೆ ಒಳಗಾಗಿದ್ದು, ಅವರು ಮನೆಯಲ್ಲಿ ಮಲಗಿದ ಸ್ಥಿತಿಯಲೇ ಇದ್ದರು.

ಈ ಕುರಿತು ‘ ಸುದ್ದಿ’ ಪತ್ರಿಕೆ ಹಾಗೂ ಚಾನೆಲ್ ನಲ್ಲಿ ವರದಿ ಪ್ರಸಾರಗೊಂಡಿತ್ತು. ಇದೀಗ ಕನಕಮಜಲು ಗ್ರಾಮ ಪಂಚಾಯತಿ ವತಿಯಿಂದ ಅವರಿಗೆ 19 ಸಾವಿರ ರೂ. ವೆಚ್ಚದ ಗಾಲಿಕುರ್ಚಿಯನ್ನು ಕೊಡುಗೆಯಾಗಿ ನೀಡಲಾಗಿದೆ.


ಈ ಸಂದರ್ಭದಲ್ಲಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಶ್ರೀಮತಿ ಸರೋಜಿನಿ, ಅಧ್ಯಕ್ಷೆ ಶ್ರೀಮತಿ ಶಾರದಾ ಉಗ್ಗಮೂಲೆ, ಉಪಾಧ್ಯಕ್ಷ ರವಿಚಂದ್ರ ಕಾಪಿಲ, ಸದಸ್ಯರುಗಳಾದ ಶ್ರೀಧರ ಕುತ್ಯಾಳ, ಇಬ್ರಾಹಿಂ ಕಾಸಿಂ, ಯತೀಶರ ತಂದೆ ರಾಮ ಉಪಸ್ಥಿತರಿದ್ದರು.