ಚಾರ್ಟರ್ಡ್ ಅಕೌಂಟೆಂಟ್ ಪರೀಕ್ಷೆಯಲ್ಲಿ ಆಶೀಶ್ ಆನಂದ್ ಖಂಡಿಗ ತೇರ್ಗಡೆ

0

ಮೇ 2024 ರಲ್ಲಿ ನಡೆದ ಅಖಿಲ ಭಾರತ ಮಟ್ಟದ ಚಾರ್ಟರ್ಡ್ ಅಕೌಂಟೆಂಟ್ ಪರೀಕ್ಷೆಯಲ್ಲಿ ಆಶೀಶ್ ಆನಂದ್ ಖಂಡಿಗ ಇವರು ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆ ಗೊಂಡಿರುತ್ತಾರೆ.

ಇವರು ತನ್ನ ಪ್ರಾಥಮಿಕ ವಿದ್ಯಾಭ್ಯಾಸವ ನ್ನು ಸಂತ ಜೋಸೆಫ್ ಪ್ರಾಥಮಿಕ ಶಾಲೆ ಸುಳ್ಯ, ಕೆವಿಜಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್, ಪದವಿ ಪೂರ್ವ ಶಿಕ್ಷಣವನ್ನು ಮಂಗಳೂರಿನ ಶಾರದಾ ವಿದ್ಯಾಲಯಯದಲ್ಲಿ ಮುಗಿಸಿ ಬೆಂಗಳೂರಿನ ಲೋಹಿತ್ ಅಕಾಡೆಮಿ ಕಾಲೇಜಿನಲ್ಲಿ ಬಿ ಕಾಂ ವಿತ್ ಸಿ ಎ ಕೋರ್ಸ್ ಮಾಡಿ ಬಳಿಕ ಬೆಂಗಳೂರು ಮಲ್ಲೇಶ್ವರಂ ನಲ್ಲಿರುವ ಎನ್.ಸಿ.ಯಸ್. ರಾಘವನ್ ಚಾರ್ಟರ್ಡ್ ಅಕೌಂಟೆಂಟ್ಸ್ ಕಂಪನಿಯಲ್ಲಿ 3 ವರ್ಷಗಳ ತರಬೇತಿ ಮುಗಿಸಿ ಇದೀಗ ಸಿ ಎ ಪದವಿ ಪಡೆದಿರುತ್ತಾರೆ.

ಇವರು ಸುಳ್ಯ ರೋಟರಿ ಕ್ಲಬ್ ನಿಕಟಪೂರ್ವ ಅಧ್ಯಕ್ಷ, ಕೇರ್ಪಳ ನಿವಾಸಿ ಆನಂದ ಖಂಡಿಗ ಮತ್ತು ಮುಳ್ಯ- ಅಟ್ಲೂರು ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಶ್ರೀಮತಿ ಶೋಭಾ ರವರ ಪುತ್ರ.