ಭಾರೀ ಮಳೆ ಹಿನ್ನೆಲೆ : ಶಾಲಾ, ಕಾಲೇಜುಗಳಿಗೆ ನಾಳೆಯೂ ರಜೆ

0

ನಿರಂತರ ಒಂದು ವಾರದಿಂದ ಬಾಗಿಲು ತೆರೆಯದ ಶಿಕ್ಷಣ ಸಂಸ್ಥೆಗಳು

ಭಾರಿ ಮಳೆ, ರೆಡ್ ಅಲರ್ಟ್ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಸಹಿತ ಐದು ತಾಲೂಕುಗಳ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ಜು.19ರ ಶುಕ್ರವಾರ ರಜೆ ಘೋಷಿಸಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ನೀಡಿದ್ದಾರೆ.

ಇದರೊಂದಿಗೆ ಕಳೆದ ಒಂದು ವಾರದಿಂದ ನಿರಂತರ ಶಾಲೆಗಳಿಗೆ ರಜೆಯಾದಂತಾಗಿದೆ. ಕಳೆದ ಶನಿವಾರ ಮಳೆ ಹಿನ್ನೆಲೆಯಲ್ಲಿ ರಜೆಯಾಗಿತ್ತು. ಆದಿತ್ಯವಾರ ವಾರದ ರಜೆಯಾಗಿದ್ದು, ಸೋಮವಾರ, ಮಂಗಳವಾರ ಮಳೆ ಹಿನ್ನೆಲೆಯಲ್ಲಿ ರಜೆಯಾಗಿತ್ತು. ಬುಧವಾರ ಮೊಹರಂ ಹಿನ್ನೆಲೆಯಲ್ಲಿ ಸರಕಾರಿ ರಜೆಯಾಗಿದ್ದು, ಗುರುವಾರ ಮಳೆ ಹಿನ್ನೆಲೆಯಲ್ಲಿ ರಜೆ ಘೋಷಿಸಲಾಗಿತ್ತು.

🛑🛑🛑