ರಸ್ತೆ ದಾಟುತ್ತಿದ್ದ ಬಾಲಕನಿಗೆ ಓಮ್ನಿ ಕಾರು ಢಿಕ್ಕಿ

0

ಬಾಲಕನ ತಲೆಗೆ ಗಾಯ ಆಸ್ಪತ್ರೆಗೆ ದಾಖಲು

ರಸ್ತೆ ದಾಟುತ್ತಿದ್ದ ವೇಳೆ ಶಾಲಾ ಬಾಲಕನಿಗೆ ಓಮ್ನಿ ಢಿಕ್ಕಿ ಹೊಡೆದು ಬಾಲಕನ ತಲೆಗೆ ಗಾಯಗೊಂಡ ಘಟನೆ ಕನಕಮಜಲು ಗ್ರಾಮದ ಸುಣ್ಣಮೂಲೆಯಲ್ಲಿ ಜು.20ರಂದು ಸಂಜೆ ಸಂಭವಿಸಿದೆ.

ಸುಳ್ಯದಲ್ಲಿ ಶಾಲಾ ವಿದ್ಯಾಭ್ಯಾಸ ನಡೆಸುತ್ತಿರುವ ಆರು ವರ್ಷ ಪ್ರಾಯದ ಆಶೀಂ ಎಂಬ ಬಾಲಕ ಸುಣ್ಣಮೂಲೆಯ ಅಜ್ಜಿ ಮನೆಗೆ ಬಂದಿದ್ದು, ರಸ್ತೆ ದಾಟುತ್ತಿದ್ದ ವೇಳೆ ಕನಕಮಜಲು ಭಾಗದಿಂದ ಬಂದ ಓಮ್ನಿ ಢಿಕ್ಕಿ ಹೊಡೆದಿದ್ದು, ಬಾಲಕನ ತಲೆ ಮತ್ತು ಕೈಗೆ ಗಾಯವಾಗಿದ್ದು, ಸ್ಥಳೀಯರು ಸೇರಿ ಸುಳ್ಯದ ಕೆವಿಜಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಪಾಯದಿಂದ ಪಾರಾಗಿರುವುದಾಗಿ ತಿಳಿದುಬಂದಿದೆ.