ಕನಕಮಜಲು: ಮಳೆಗೆ ಮರಬಿದ್ದು ಅಡಿಕೆ ಮರಗಳಿಗೆ ಹಾನಿ

0

ಕನಕಮಜಲು ಗ್ರಾಮದ ಕಣಜಾಲು ಪರಿಸರದಲ್ಲಿ ನಿರಂತರ ಮಳೆಯಿಂದಾಗಿ ಮರಬಿದ್ದು, ಅಡಿಕೆ ತೋಟಕ್ಕೆ ಹಾನಿ ಸಂಭವಿಸಿದ ಘಟನೆ ಜು‌.30ರಂದು ಬೆಳಿಗ್ಗೆ ಸಂಭವಿಸಿದೆ.

ಕಣಜಾಲಿನಲ್ಲಿ ಹರಿಯುತ್ತಿರುವ ಸಣ್ಣ ತೋಡಿನ ನೀರು ನುಗ್ಗಿ ತೀರ್ಥರಾಮ ಕಣಜಾಲು ಅವರ ಕೆರೆಯ ಬದಿಯಲ್ಲಿ ಮಣ್ಣು ಕುಸಿದಿರುವುದಾಗಿ ತಿಳಿದುಬಂದಿದೆ.
ಪರಿಣಾಮವಾಗಿ ಕೆರೆಯ ಬದಿಯಲ್ಲಿದ್ದ ಹಲಸಿನ ಮರ ಬಿದ್ದು, ಅಡಿಕೆ ಮರಗಳಿಗೆ ಹಾನಿ ಸಂಭವಿಸಿದೆ.
ಈ ಕೆರೆಯ ಪಕ್ಕದಲ್ಲಿ ಕಣಜಾಲಿನ ಮೂಲಕ ಸಬ್ಬೇಜಿ -ಬಾಳೆಹಿತ್ತಿಲು ಸಂಪರ್ಕಿಸುವ ಕಾಲುದಾರಿಯೊಂದಿದ್ದು, ರಸ್ತೆ ಬಿರುಕು ಬಿಟ್ಟಿರುವುದಾಗಿ ತಿಳಿದುಬಂದಿದೆ.