ಸುಬ್ರಹ್ಮಣ್ಯ ರೋಟರಿ ಕ್ಲಬ್ ನೂತನ ಸದಸ್ಯರಿಗೆ ಪುನಸ್ಚೇತನ ಕಾರ್ಯಕ್ರಮ

0

ಸುಬ್ರಹ್ಮಣ್ಯ ಆಗಸ್ಟ್ 6: ರೋಟರಿ ಜಿಲ್ಲೆ 31 81ರ ವಲಯ5 ರ ಎಲ್ಲಾ ಕ್ಲಬ್ಬುಗಳ ನೂತನ ಸದಸ್ಯರುಗಳಿಗೆ ಪುನಃ ಚೇತನ ಕಾರ್ಯಕ್ರಮ ಹಾಗೂ ಅಧ್ಯಕ್ಷ ಕಾರ್ಯದರ್ಶಿ ಮತ್ತು ಜೊನಲ್ ಲೆಫ್ಟಿನೆಂಟ್ ಅವರಿಗೆ ರಿವ್ಯೂ ಮೀಟಿಂಗ್ ಪುತ್ತೂರಿನ ಮನಿಷಾ ಸಭಾಂಗಣದಲ್ಲಿ ಆಗಸ್ಟ್5 ರಂದು ನಡೆಯಿತು.

ಸುಬ್ರಹ್ಮಣ್ಯ ರೋಟರಿ ಕ್ಲಬ್ಬಿನ ಅಧ್ಯಕ್ಷ ಚಂದ್ರಶೇಖರ ನಾಯರ್, ಜತೆ ಕಾರ್ಯದರ್ಶಿ ಭವಾನಿ ಶಂಕರ ಫೇಲಾಜೆ, ಜೋನಲ್ ಲೆಫ್ಟಿನೆಂಟ್ ವಿಶ್ವನಾಥ ನಡುತೋಟ, ಹಾಗೂ ನೂತನ ಸದಸ್ಯರುಗಳಾದ ದಯಾನಂದ, ನವೀನ ,ಸಮೀರ್, ಲೊಕೇಶ, ಭಾಗವಹಿಸಿದ್ದರು. ರೋಟರಿ ಜಿಲ್ಲೆ 3181 ಇದರ ಡಿಸ್ಟಿಕ್ ಗವರ್ನರ್ ವಿಕ್ರಮ ದತ್ತ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಜನರಲ್ ಸೆಕ್ರೆಟರಿ ರಿತೇಶ್ ಬಾಳಿಗ, ಹಾಗೂ ತರಬೇತುದಾರರಾದ ಡಾl ಶಿವಪ್ರಸಾದ್, ಡಾ lಕೇಶವ ಪಿಕೆ, ನರಸಿಂಹ ಪೈ ತರಬೇತಿ ನೀಡಿದರು. ರಿವ್ಯೂ ಮೀಟಿಂಗ್ ನಲ್ಲಿ ಜಿಲ್ಲಾ ಗವರ್ನರ್ ವಿಕ್ರಮ ದತ್ತ ಅವರೊಂದಿಗೆ ಸಹಾಯಕ ಗವರ್ನರ್ಗಳಾದ ವಿನಯಕುಮಾರ್ ಕೆ ಸೂರ್ಯನಾಥ ಆಳ್ವ ಹರ್ಷಕುಮಾರ ಹಾಗೂ ಜೋನಲ್ ಲೆಫ್ಟಿನೆಂಟ್ಗಳಾದ ಪ್ರಭಾಕರ ನಾಯರ್, ವಿಶ್ವನಾಥ ನಡು ತೋಟ, ವೆಂಕಟ್ರಮಣ ಗೌಡ ಕಳುವಾಜೆ, ಮಹಮ್ಮದ್ ರಫೀಕ್, ವಿಲ್ಸನ್ ಪೀಟರ್ ಪ್ರಭಾಕರ್, ಹಾಗೂ ಮುರಳಿಧರ ರೈ ಭಾಗವಹಿಸಿದ್ದರು.