ಆ.15ರ ತಾಲೂಕು ಮಟ್ಟದ ಸ್ವಾತಂತ್ರ್ಯೋತ್ಸವದಲ್ಲಿ ಮೂವರು ಹಿರಿಯ ಪತ್ರಕರ್ತರು, ಮಾಜಿ ಯೋಧರಿಗೆ ಸನ್ಮಾನ

0

ಆ.15ರಂದು ಸುಳ್ಯ ತಾಲೂಕು ಮಟ್ಟದ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಸುಳ್ಯದ ಮೂವರು ಹಿರಿಯ ಪತ್ರಕರ್ತರು ಹಾಗೂ ಮೂವರು ನಿವೃತ್ತ ಯೋಧರನ್ನು ಸನ್ಮಾನಿಸಲಾಗುತ್ತದೆ.

ಹಿರಿಯ ಪತ್ರಕರ್ತರರಾದ ಸುರೇಶ್ ಬೆಳಗಜೆ, ಎನ್.ಎ.ಅಬ್ದುಲ್ಲ ನಾವೂರು, ಗಂಗಾಧರ ಮಟ್ಟಿ, ನಿವೃತ್ತ ಯೋಧರಾದ ಕೆ.ಪಿ. ಜಗದೀಶ, ಮಾಧವ ಬಿ.ಕೆ., ರಾಮದಾಸ್ ಶೇಟ್ ರನ್ನು ಸನ್ಮಾನಿಸಲಾಗುತ್ತದೆ.

ಶಾಸಕಿ ಭಾಗೀರಥಿ ಮುರುಳ್ಯ ರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ತಹಶೀಲ್ದಾರ್ ಮಂಜುನಾಥ್ ‌ಜಿ. ಧ್ವಜಾರೋಹಣ ನೆರವೇರಿಸಲಿದ್ದಾರೆ. ಹಲವು ಮಂದಿ ಗಣ್ಯರು ಸಮಾರಂಭದಲ್ಲಿ ಭಾಗವಹಿಸುವರು.