ಜಟ್ಟಿಪಳ್ಳದಲ್ಲಿ ಗಣೇಶೋತ್ಸವ ಆಮಂತ್ರಣ ಬಿಡುಗಡೆ

0

ಶ್ರೀ ರಾಮ ಭಜನಾ ಸೇವಾ ಸಂಘ ರಿ. ಇದರ ಆಶ್ರಯದಲ್ಲಿ ನಡೆಯುವ 31ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ” ಶ್ರೀ ಚೆನ್ನೇಶವ ದೇವರ ವಸಂತ ಕಟ್ಟೆ”ಯಲ್ಲಿ ನಡೆಯಿತು.


ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಹರಿಶ್ಚಂದ್ರ ಎಂ.ಆರ್, ಸಮಿತಿಯ ಉಪಾಧ್ಯಕ್ಷರಾದ ರಮಾನಂದ ರೈ , ಪ್ರದಾನ ಕಾರ್ಯದರ್ಶಿ ರಘುನಾಥ ಜಟ್ಟಿಪಳ್ಳ,
ಕೋಶಾಧಿಕಾರಿ ಸಂತೋಷ್ ಕುಮಾರ್ ಶೆಟ್ಟಿ, ಸಮಿತಿಯ ಸುದ್ದಿ ಬಿಡುಗಡೆ ಪತ್ರಿಕೆಯ ಸಂಪಾದಕರಾದ ಹರೀಶ್ ಬಂಟ್ವಾಳ್, ಕಪಿಲ ಯುವಕ ಮಂಡಲದ ಅಧ್ಯಕ್ಷರಾದ ಹರೀಶ್ ಜೆ. ಬಿ., ಸಮಿತಿ ಸದಸ್ಯರಾದ ಮಹೇಶ್ ಜಟ್ಟಿಪಳ್ಳ, ಚೇತನ್ ಜಟ್ಟಿಪಳ್ಳ, ವಿಪಿನ್, ಚಂದ್ರಹಾಸ ,ಕುಲದೀಪ್ ಪೆಲ್ತಡ್ಕ, ಘನಶ್ಯಾಂ, ಹೂವಪ್ಪ ಗೌಡ, ಕೃಷ್ಣ ಜೆ. ಮಂಜುನಾಥ್, ನಿತೇಶ್, ಸದಾಶಿವ, ಕಿರಣ್ , ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ರಘುನಾಥ ಜಟ್ಟಿಪಳ್ಳ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ವಂದಿಸಿದರು.