ದಯಪ್ರಸಾದ್ ಚೀಮುಳ್ಳು ರಿಗೆ ‘2024 ಲಕ್ಷ್ಮಿ ಭಾಸ್ಕರ ಕೃಷಿ ಕ್ಷೇತ್ರ ನಿಷ್ಠ’ ಅವಾರ್ಡ್

0

ಪಂಬೆತ್ತಾಡಿ ಗ್ರಾಮದ ವನ ಸಿರಿ ಫಾರ್ಮ್ಸ್ ಮತ್ತು ಸಾನಿಕಾ ನರ್ಸರಿ ಮಾಲಕ ದಯಪ್ರಸಾದ್ ಚೀಮುಳ್ಳು ರವರಿಗೆ ಮಂಗಳೂರು ಕೇದಿಗೆ ಪ್ರತಿಷ್ಠಾನ ಮತ್ತು ಸೀನಿಯರ್ ಚೇಂಬರ್ ಇಂಟರ್ನೇಶ್ನಲ್ ವತಿಯಿಂದ ನಡೆದ ಕೇದಿಗೆ ಪ್ರತಿಷ್ಠಾನ ಮಂಗಳೂರು ಮತ್ತು ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಮಂಗಳೂರು ಇದರ ವತಿಯಿಂದ ‘2024 ಲಕ್ಷ್ಮಿ ಭಾಸ್ಕರ ಅವಾರ್ಡ್ ಕೃಷಿ ಕ್ಷೇತ್ರ ನಿಷ್ಠ ‘ಅವಾರ್ಡ್ ನೀಡಿ ಗೌರವಿಸಿದೆ.

ಆ.17 ರಂದು ಮಂಗಳೂರು ಲಯನ್ಸ್ ಸೇವಾ ಭವನದಲ್ಲಿ ನಡೆದ ಅವಾರ್ಡ್ ಕಾರ್ಯಕ್ರಮದಲ್ಲಿ ಈ ಸನ್ಮಾನ ನೀಡಿ ಗೌರವಿಸಿದೆ.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯರಾದ ಕ್ಯಾಪ್ಟನ್ ಗಣೇಶ್ ಕಾರ್ನಿಕ್, ಜೆ ಸಿ ಸೀನಿಯರ್ ಚೇಂಬರ್ ರಾಷ್ಟ್ರೀಯ ಅಧ್ಯಕ್ಷರಾದ ಜೆ ಸಿ ಚಿತ್ರಕುಮಾರ್, ಕೇದಿಕೆ ಪ್ರತಿಷ್ಠಾನದ ಅಧ್ಯಕ್ಷ ಅರವಿಂದ್ ರಾವ್ ಕೇದಿಗೆ , ಹಾಗೂ ಗಣ್ಯರಾದ ಹರೀಶ್ ಪುನರೂರು, ಸೀನಿಯರ್ ಜೆ ಸಿ ಅಧ್ಯಕ್ಷ ಜೆ ಸಿ ದತ್ತಾತ್ರೇಯ ಮೊದಲಾದವರು ಉಪಸ್ಥಿತರಿದ್ದರು.

ದಯಾ ಪ್ರಸಾದ್ ರವರು ಸುಮಾರು 800 ಕ್ಕೂ ಹೆಚ್ಚು ಹಣ್ಣಿನ ಗಿಡಗಳ ಸಂಗ್ರಹಣೆ ಮಾಡಿದ್ದು ಉತ್ತಮ ಕೃಷಿಕರೂ ಕೂಡ ಆಗಿದ್ದಾರೆ.