ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಟ್ರಸ್ಟಿಯಲ್ಲಿ ಸುಬ್ರಹ್ಮಣ್ಯದ ನಾಲ್ವರಿಗೆ ಅವಕಾಶ ಬೇಕು

0

ಕಾಂಗ್ರೆಸ್ ಕಾರ್ಯಕರ್ತರಿಂದ ರಮಾನಾಥ ರೈ ಮುಂದೆ ಅಹವಾಲು

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯಲ್ಲಿ ಸುಬ್ರಹ್ಮಣ್ಯದ ನಾಲ್ವರಿಗೆ ಅವಕಾಶ ಬೇಕು ಎಂದು ಆ.14 ರಂದು ಸುಬ್ರಹ್ಮಣ್ಯದ ಕಾಂಗ್ರೆಸ್ ಕಾರ್ಯಕರ್ತರ ನಿಯೋಗ ಮಾಜಿ ಸಚಿವ ರಮಾನಾಥ ರೈ ಮುಂದೆ ಅಹವಾಲು ಸಲ್ಲಿಸಿದೆ.

ಸುಬ್ರಹ್ಮಣ್ಯಕ್ಕೆ ದೇವಸ್ಥಾನದ ಟ್ರಸ್ಟಿಯ ಅಧ್ಯಕ್ಷ ಸ್ಥಾನ ಹಾಗೂ 3 ಸದಸ್ಯರುಗಳನ್ನಾಗಿ ಸುಬ್ರಹ್ಮಣ್ಯ ದ ಸ್ಥಳೀಯರನ್ನು ನೇಮಿಸಬೇಕೆಂದು ರಮಾನಾಥ ರೈ ಮುಂದೆ ಭೇಡಿಕೆ ಇಟ್ಟಿದ್ದಾರೆ.

ಈ ಸಂದರ್ಭ ಟ್ರಸ್ಟಿ ಆಕಾಂಕ್ಷಿಗಳಾದ ಹರೀಶ್ ಇಂಜಾಡಿ, ಶಿವರಾಮ ರೈ ಸುಬ್ರಹ್ಮಣ್ಯ ಭಟ್, ಮಾಧವ, ವಿಮಲಾ ರಂಗಯ್ಯ , ಕಿಶೋರ್ ಆರಂಪಾಡಿ, ಲೋಲಾಕ್ಷ ಕೈಕಂಬ, ಮೋಹನ್ದಾಸ್ ರೈ, ಕಾರ್ತಿಕ್ ಉಡುದೋಳಿ, ಶೇಷಕುಮಾರ್, ರವಿ ದೇವರ ಗದ್ದೆ, ಸೌಮ್ಯ ಆದಿಯಾಗಿ ಸುಮಾರು50 ಕ್ಕೂ ಅಧಿಕ ಜನ ಕಾರ್ಯಕರ್ತರುಗಳು ಉಪಸ್ಥಿತರಿದ್ದರೆಂದು ತಿಳಿದು ಬಂದಿದೆ.