ಹರಿಹರ ಪಲ್ಲತಡ್ಕ : ಮರ ಬಿದ್ದು ಹಾನಿ ಸಂಭವಿಸಿದ ಮನೆ ಬಳಿ ಇದ್ದ ಅಪಾಯಕಾರಿ ಮರಗಳ ತೆರವು

0

ಸಂಭಾವ್ಯ ಅಪಾಯ ತಪ್ಪಿಸಲು ಅರಣ್ಯ ಇಲಾಖೆಯಿಂದ ಸಹಕಾರ

ಹರಿಹರ ಪಲ್ಲತಡ್ಕ ಪಲ್ಲತಡ್ಕ ಬಳಿ ಆ.21 ರ ರಾತ್ರಿ ಮರ ಬಿದ್ದು ಮನೆಹಾನಿ ಸಂಭವಿಸಿದ ಘಟನೆ ನಡೆದ ಸ್ಥಳದಲ್ಲಿ ಇನ್ನೂ ಅಪಾಯಕಾರಿಯಾಗಿದ್ದ ಮರಗಳ ತೆರವು ಕಾರ್ಯ ಇಂದು ನಡೆಯಿತು.

ಈ ಮನೆಗಳ ಬಳಿ ಇನ್ನೂ ಅನೇಕ ಮರಗಳು ಮುರಿದು, ಬುಡ ಸಮೇತ ಬೀಳುವ ಸಂಭವವಿದ್ದು ಅದರ ತೆರವು ಕಾರ್ಯಾಚರಣೆ ಆ.೨೪ ರಂದು ನಡೆಸಲಾಯಿತು. ಹರಿಹರ ಪಂಚಾಯತ್ ವತಿಯಿಂದ ಅರಣ್ಯ ಇಲಾಖೆಗೆ ಮನವಿ ಮಾಡಿದ್ದು, ಅದರಂತೆ ಸಂಭಾವ್ಯ ಅಪಾಯ ತಪ್ಪಿಸುವ ಸಲುವಾಗಿ ಸುಬ್ರಹ್ಮಣ್ಯ ಅರಣ್ಯ ಇಲಾಖೆಯವರು ಮರ ತೆರವು ಮಾಡಿ ಸಹಕರಿಸಿದರು.