ಸಿ.ವಿ.ಕಿರಣ್ ಕುಮಾರ್‌ರಿಗೆ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿಯಾಗಿ ಮುಂಭಡ್ತಿ

0

ಸುಳ್ಯ ಅಗ್ನಿಶಾಮಕ ಠಾಣೆಯಲ್ಲಿ ಅಗ್ನಿಶಾಮಕ ಚಾಲಕರಾಗಿದ್ದ ಸಿ.ವಿ. ಕಿರಣ್ ಕುಮಾರ್‌ರಿಗೆ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿಯಾಗಿ ಪದೋನ್ನತಿಗೊಂಡಿದ್ದು ಅವರು ಮಂಗಳೂರು ಕದ್ರಿ ಠಾಣೆಗೆ ವರ್ಗಾವಣೆಯಾಗಿದ್ದಾರೆ.
೨೦೦೫ರಲ್ಲಿ ಅಗ್ನಿಶಾಮಕ ಚಾಲಕರಾಗಿ ಬೆಂಗಳೂರಿನಲ್ಲಿ ಸೇವೆ ಆರಂಭಿಸಿದ ಇವರು, ಬಳಿಕ ಬೇಲೂರು, ಗೋಣಿಕೊಪ್ಪದಲ್ಲಿ ಸೇವೆ ಸಲ್ಲಿಸಿದರು. ೨೦೨೨ರಲ್ಲಿ ಸುಳ್ಯಕ್ಕೆ ವರ್ಗಾವಣೆಗೊಂಡು ಬಂದಿದ್ದರು. ಇದೀಗ ಅವರಿಗೆ ಪದೋನ್ನತಿಯಾಗಿದೆ.


ಕಿರಣ್ ಕುಮಾರ್ ಸಂಪಾಜೆ ಗ್ರಾಮದ ಕಲ್ಲುಗುಂಡಿಯವರು. ಪತ್ನಿ ಶ್ರೀಮತಿ ವಿನುತಾ ಕೆ. ಗೃಹಿಣಿಯಾಗಿದ್ದಾರೆ. ಪುತ್ರ ಚಿರಾಗ್ ಗೂನಡ್ಕ ಮಾರುತಿ ವಿದ್ಯಾಸಂಸ್ಥೆಯ ೭ನೇ ತರಗತಿ ವಿದ್ಯಾರ್ಥಿ.