ದುಗ್ಗಲಡ್ಕ ಸರಕಾರಿ ಪ್ರೌಢಶಾಲಾ ದೈ.ಶಿ.ಶಿಕ್ಷಕ ವೆಂಕಟ್ರಮಣ ಕೆ.ಎಸ್.ರಿಗೆ ನಿವೃತ್ತಿ- ಬೀಳ್ಕೊಡುಗೆ

0


ಸರಕಾರಿ ಪ್ರೌಢಶಾಲೆ ದುಗ್ಗಲಡ್ಕ ದಲ್ಲಿ ಕಳೆದ 12 ವರ್ಷ ಗಳಿಂದ ದೈಹಿಕ ಶಿಕ್ಷಣ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿ ಆ.31ರಂದು ವಯೋ ನಿವೃತ್ತರಾದ ವೆಂಕಟ್ರಮಣ ಕೆ ಎಸ್ ರವರ ಬೀಳ್ಕೊಡುಗೆ ಸಮಾರಂಭ ಆ.31ರಂದು ನಡೆಯಿತು.


ಎಸ್ ಡಿ ಎಂ ಸಿ ಅಧ್ಯಕ್ಷ ನಾರಾಯಣ ಬಿ. ಯವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ನಗರ ಪಂಚಾಯತ್ ನ ನೂತನ ಅಧ್ಯಕ್ಷೆ ಶ್ರೀಮತಿ ಶಶಿಕಲಾ ಎ., ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಆಶಾ ನಾಯಕ್ , ಸಿ ಆರ್ ಪಿ ಮಮತಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ನಿವೃತ್ತ ಶಿಕ್ಷಕರಿಗೆ ಸನ್ಮಾನಿಸಿ ಶುಭ ಕೋರಿದರು.ಸ ಪ್ರೌ.ಶಾಲೆ ಯೇನೇಕಲ್ ಇಲ್ಲಿನ ದೈಹಿಕ ಶಿಕ್ಷಣ ಶಿಕ್ಷಕಿ ಚಿನ್ನಮ್ಮ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿ ಶುಭ ಕೋರಿದರು. ಸ. ಪ. ಪೂ.ಕಾ. ಸುಳ್ಯ ಇಲ್ಲಿನ ಸಮಾಜ ಶಾಸ್ತ್ರ ಉಪನ್ಯಾಸಕ ಶಿವರಾಮ ನಾಯ್ಕ್ ನಿವೃತ್ತರ ಅಭಿನಂದನಾ ಭಾಷಣ ಮಾಡಿದರು . ಶಾಲಾ ವಿದ್ಯಾರ್ಥಿಗಳು, ಮುಖ್ಯ ಶಿಕ್ಷಕರು, ಶಿಕ್ಷಕರು ಮತ್ತು ಪೋಷಕರು ನಿವೃತ್ತರ ಬಗ್ಗೆ ಅನಿಸಿಕೆ ವ್ಯಕ್ತ ಪಡಿಸಿ, ಶುಭ ಕೋರಿದರು. ಶಾಲಾ ವತಿಯಿಂದ ನಿವೃತ್ತ ಶಿಕ್ಷಕರನ್ನು ಗೌರವಪೂರಕವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು. ನಿವೃತ್ತ ಶಿಕ್ಷಕ ವೆಂಕಟ್ರಮಣ ಕೆ.ಎಸ್. ತನ್ನ ಸೇವಾವಧಿಯನ್ನು ಮೆಲುಕು ಹಾಕಿ, ಸಹಕರಿಸಿದ ಸರ್ವರಿಗೂ ವಂದಿಸಿದರು.ಶಾಲೆಗೆ ದತ್ತಿ ನಿಧಿ ನೀಡಿದರು. ಶಾಲಾ ಅಡುಗೆ ಸಿಬ್ಬಂದಿಗಳನ್ನು ಗೌರವಿಸಿದರು. ಸಮಾರಂಭದಲ್ಲಿ ನೂತನ ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ಎ.ರವರನ್ನು ಶಾಲಾ ವತಿಯಿಂದ ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.


ಶಿಕ್ಷಕರಾದ ಉದಯ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು. ಗೀತಾ ಸನ್ಮಾನಿತ ಶಿಕ್ಷಕರ ಸನ್ಮಾನ ಪತ್ರ ವಾಚಿಸಿದರು. ಶೋಭಾ ಸ್ವಾಗತಿಸಿದರು. ದೀಪಾ ಶಂಕರಿ ವಂದಿಸಿದರು. ಉಣ್ಣಿಕೃಷ್ಣ ಸಹಕರಿಸಿದರು . ಸನ್ಮಾನಿತ ಶಿಕ್ಷಕರ ಪತ್ನಿ ಕೆಪಿಎಸ್ ಗಾಂಧಿನಗರ( ಪ್ರೌಢ )ಇಲ್ಲಿನ ದೈಹಿಕ ಶಿಕ್ಷಣ ಶಿಕ್ಷಕಿ ಪದ್ಮಿನಿ, ಪುತ್ರ ವೈಭವ್, ಸ ಪ್ರೌ ಶಾಲೆ ಆಲೆಟ್ಟಿ ಶಿಕ್ಷಕ ಸುನಿಲ್,
ಎಸ್ ಡಿ ಎಂ ಸಿ ಸದಸ್ಯರು, ಶಾಲಾ ವಿದ್ಯಾರ್ಥಿಗಳು, ಹಿರಿಯ ವಿದ್ಯಾರ್ಥಿಗಳು ,ಪೋಷಕರು, ಸಾರ್ವಜನಿಕರು ಸಮಾರಂಭದಲ್ಲಿ ಭಾಗವಹಿಸಿದರು.