ಸೆ.15; ಭಾರತೀಯ ಕಿಸಾನ್ ಸಂಘ ಸುಳ್ಯ ತಾಲೂಕು ವತಿಯಿಂದ ಬಲರಾಮ ಜಯಂತಿ

0


ಭಾರತೀಯ ಕಿಸಾನ್ ಸಂಘ ಸುಳ್ಯ ತಾಲೂಕು, ಬಾಳಿಲ ಇದರ ಆಶ್ರಯದಲ್ಲಿ ಬಲರಾಮ ಜಯಂತಿ ಸೆ.15ರಂದು ಕಟ್ಟ ಚಂದ್ರಬಾಗಿ ಕಾಂತಪ್ಪ ಶೆಟ್ಟಿ ಕಲಾಭವನ ಎಣ್ಮೂರು, ನಿಂತಿಕಲ್ಲು ಇಲ್ಲಿ ನಡೆಯಲಿದೆ.


ಸಭಾಧ್ಯಕ್ಷತೆಯನ್ನು ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಎನ್‌.ಜಿ. ಪ್ರಭಾಕರ್ ರೈ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಎಣ್ಮೂರು ನಾಗಬ್ರಹ್ಮ ಶ್ರೀ ಕೋಟಿ ಚೆನ್ನಯ ಗರಡಿಯ ಅನುವಂಶಿಕ ಆಡಳಿತದಾರರಾದ ಕೆ. ರಾಮಕೃಷ್ಣ ಶೆಟ್ಟಿ ಕಟ್ಟಬೀಡು, ಕೆ.ಎಸ್. ಪ್ರಮೋದ್ ಕುಮಾರ್ ( ವಿಷಯ: ಡ್ರಾಗನ್ ಫ್ರೂಟ್ ಕೃಷಿ ಹಾಗೂ ಮಾರಾಟ),ಉಜಿರೆ ಕರಾವಳಿ ಆಗ್ರೋದ ಲಕ್ಷ್ಮಣ್ ಜಿ.ಎಸ್.(ವಿಷಯ: ವಿಯೆಟ್ನಾಂ ಮಾದರಿ ಕಾಳು ಮೆಣಸು ಕೃಷಿ) ಭಾಗವಹಿಸಲಿದ್ದಾರೆ. ದೇಶೀ ತಳಿ ಗೋ ಸಾಕಣೆ ಹಾಗೂ ಗವ್ಯ ಉತ್ಪನ್ನಗಳ ಕ್ಷೇತ್ರದಲ್ಲಿ ಮಹಾಲಿಂಗೇಶ್ವರ ಭಟ್ ಜೋಗಿಯಡ್ಕ, ಪ್ರಗತಿಪರ ಕೃಷಿಕರಾದ ಶ್ರೀಮತಿ ನಾಗವೇಣಿ ಕೆ.ರೈ ಎಣ್ಮೂರುಗುತ್ತುರವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುತ್ತದೆ.