ಸುಳ್ಯ ಗಣೇಶೋತ್ಸವ- ಕೃಷ್ಣಾರ್ಜುನ ಕಾಳಗ ಯಕ್ಷಗಾನ ಬಯಲಾಟ

0

ಸುಳ್ಯ ಶ್ರೀ ಸಿದ್ಧಿವಿನಾಯಕ ಸೇವಾ ಸಮಿತಿ, ಸಾರ್ವಜನಿಕ ಶ್ರೀ ದೇವತಾರಾಧನಾ ಸಮಿತಿ ವತಿಯಿಂದ ಆಚರಿಸಲ್ಪಡುತ್ತಿರುವ 56 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಮೂರನೇ ದಿನದಂದು ಸೆ.9 ರಂದು ಅಪರಾಹ್ನ ಸ್ಥಳೀಯ ಭಜನಾ ಮಂಡಳಿಯ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಿತು.


ಸಂಜೆ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಕೃಷ್ಣಾರ್ಜುನ ಕಾಳಗ ಎಂಬ ಯಕ್ಷಗಾನ ಬಯಲಾಟ ಪ್ರದರ್ಶನ ಗೊಂಡಿತು. ಹಿಮ್ಮೇಳದಲ್ಲಿ ಭರತ್ ಶೆಟ್ಟಿ, ಶ್ರೀವತ್ಸ ಸೋಮಯಾಜಿ, ಪ್ರಶಾಂತ್ ಶೆಟ್ಟಿ ವಗೆನಾಡು, ಲವಕುಮಾರ ಐಲ,ನಿಶ್ವಥ್ ಜೋಗಿ, ಮುಮ್ಮೇಳದಲ್ಲಿ ಅಮ್ಮುಂಜೆ ಮೋಹನ ಕುಮಾರ್, ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ರಕ್ಷಿತ್ ಶೆಟ್ಟಿ ಪಡ್ರೆ, ಮೋಹನ ಮುಚ್ಚೂರು, ಮನೀಶ್ ಎಡನೀರು, ರಕ್ಷಿತ್ ರೈ ದೇಲಂಪಾಡಿ, ದತ್ತೇಶ್, ಉಮೇಶ್ ಶೆಟ್ಟಿ ಉಬರಡ್ಕ ಪಾತ್ರಧಾರಿಗಳಾಗಿದ್ದರು. ಸಮಿತಿ ಉಪಾಧ್ಯಕ್ಷ ಶಶಿಧರ ಎಂ.ಜೆ ಕೊಯಿಕುಳಿ ಸಂಯೋಜನೆ ಮಾಡಿದರು.