ಭಾಜಪ ಎಸ್.ಟಿ. ಮೋರ್ಚಾ ವತಿಯಿಂದ ಮೋದಿಜೀ ಜನ್ಮದಿನಾಚರಣೆ ಹಾಗೂ ಬಿಜೆಪಿ ಸದಸ್ಯತ್ವ ಅಭಿಯಾನ

0

ಭಾಜಪ ಸುಳ್ಯ ಮಂಡಲದ ಎಸ್.ಟಿ. ಮೋರ್ಚಾ ವತಿಯಿಂದ ನರೇಂದ್ರ ಮೋದಿಜೀ ಜನ್ಮದಿನಾಚರಣೆ ಹಾಗೂ ಬಿಜೆಪಿ ಸದಸ್ಯತ್ವ ಅಭಿಯಾನ ಇಂದು
ಕೊಯಿಲ ಗ್ರಾಮದ ಏಣಿತಡ್ಕ ಎಂಬಲ್ಲಿ ನಡೆಸಲಾಯಿತು.

  ಪ್ರಧಾನಿ ಮೋದಿಜಿಯವರ ಆಡಳಿತ ಹುದ್ದೆಗೆ ಶಕ್ತಿತುಂಬಲು ದೇವರಲ್ಲಿ ವಿಶೇಷ ಪ್ರಾಥನೆ ಸಲ್ಲಿಸಲಾಯಿತು ಬಳಿಕ  ಬಿಜೆಪಿ ಸದಸ್ಯತ್ವ ಅಭಿಯಾನದ ಅಂಗವಾಗಿ ಮಾಹಿತಿ ಕಾರ್ಯಾಗಾರವನ್ನು ಹಮ್ಮಿಕೊಂಡು ಇದರ ಮಾಹಿತಿಯನ್ನು ನೀಡಲಾಯಿತು.






        ಈ ಸಂಧರ್ಭ ಎಸ್.ಟಿ. ಮೋರ್ಚಾದ ಅಧ್ಯಕ್ಷರಾದ ಗಂಗಾಧರ ಪೆರಿಯಡ್ಕ, ಪ್ರಧಾನ ಕಾರ್ಯದರ್ಶಿಗಳಾದ ಬಾಲಕೃಷ್ಣ ಏನೆಕಲ್ಲು, ಬಾಲಕೃಷ್ಣ ಅಲಂಗಪ್ಪೆ,ಬೂತ್ ಕಾರ್ಯದರ್ಶಿ ನಿರಂಜನ್, ಲ್ಯಾಂಪ್ ಸೊಸೈಟಿ ನಿರ್ದೇಶಕರಾದ ನೇತ್ರಕ್ಷ, ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಸುಂದರ ನಾಯ್ಕ್, ಪ್ರಮುಖರಾದ ಯೋಗೇಂದ್ರ ನಾಯ್ಕ್, ಬಾಲಕೃಷ್ಣ ನಾಯ್ಕ ಕೊರಂತಾಜೆ ಹಾಗೂ ಬೂತ್ ಮಟ್ಟದ ಅನೇಕ ಕಾರ್ಯಕರ್ತರು, ಹಿರಿಯರು ಉಪಸ್ಥಿತರಿದ್ದರು..