ಬೆಟ್ಟಂಪಾಡಿ ತಾಲೂಕು ಮಟ್ಟದ ಭಜನಾ ತರಬೇತಿ ಶಿಬಿರದ ಪೂರ್ವ ಭಾವಿ ಸಭೆ- ಸಂಚಾಲಕರಾಗಿ ಅವಿನ್ ಬೆಟ್ಟಂಪಾಡಿ ಆಯ್ಕೆ

0

ಸುಳ್ಯ ತಾಲೂಕು ಮಟ್ಟದ ಭಜನಾ ತರಬೇತಿ ಶಿಬಿರದ ಪೂರ್ವಭಾವಿ ಸಭೆಯು ಬೆಟ್ಟಂಪಾಡಿ ಶ್ರೀ ಮಂಜುನಾಥೇಶ್ವರ ಭಜನಾ ಮಂದಿರದಲ್ಲಿ ನಡೆಯಿತು. ಈ ಸಂದರ್ಭದಲ್ಲಿ
ಶಿಬಿರದ ನೂತನ ಸಮಿತಿಯನ್ನು ರಚಿಸಲಾಯಿತು. ಸಂಚಾಲಕರಾಗಿ ಅವಿನ್ ಬೆಟ್ಟಂಪಾಡಿ, ಸಹ ಸಂಚಾಲಕ ರಾಜ್ ಮುಖೇಶ್ ಬೆಟ್ಟಂಪಾಡಿ, ನಾರಾಯಣ ಬೆಟ್ಟಂಪಾಡಿ, ಉದಯಭಾಸ್ಕರ್ ಸುಳ್ಯ, ಸುರೇಶ್ ವಿ ಆರ್, ವಿಶ್ವನಾಥ ಪಡ್ಡಂಬೈಲ್ ರವರನ್ನು ಆಯ್ಕೆ ಮಾಡಲಾಯಿತು. ಜಿಲ್ಲೆಯ ಹಾಗೂ ತಾಲೂಕಿನ ನುರಿತ ಸಂಪನ್ಮೂಲ ವ್ಯಕ್ತಿಗಳ ಮೂಲಕ ಅಕ್ಟೋಬರ್ ತಿಂಗಳ ದಸರಾ ರಜೆಯಲ್ಲಿ ಕುಳಿತು ಮತ್ತು ಕುಣಿತ ಭಜನೆಯ ಶಿಬಿರವನ್ನು ನಡೆಸುವುದೆಂದು ತೀರ್ಮಾನಿಸಲಾಯಿತು.

ಶಿಬಿರದ ಕೊನೆಯ ದಿನ ಭಜನಾ ಮಂಗಳೋತ್ಸವ ಹಾಗೂ ಭಕ್ತಿ ಗಾನ ವೈಭವ ಕಾರ್ಯಕ್ರಮವು ನಡೆಸುವುದಾಗಿ ನಿರ್ಧರಿಸಲಾಯಿತು.