ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದಲ್ಲಿ ಕಾಳು ಮೆಣಸು ಖರೀದಿ ಕೇಂದ್ರ ಆರಂಭ

0

ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಆಶ್ರಯದಲ್ಲಿ ಕ್ಯಾoಪ್ಕೋ ಸಂಸ್ಥೆಯ ಸಹಯೋಗದೊಂದಿಗೆ ಕಾಳು ಮೆಣಸು ಖರೀದಿ ಕೇಂದ್ರ ಸೆ. 24ರಂದು ಆರಂಭಗೊಂಡಿತು.


ಕ್ಯಾಂಪ್ಕೋ ಸಂಸ್ಥೆಯ ನಿಂತಿಕಲ್ ಶಾಖೆಯ ಉಪ ಶಾಖೆಯಾಗಿ ಕಳಂಜ ಶಾಖೆ ಯಲ್ಲಿ ಆರಂಭಗೊಂಡಿದ್ದು, ಪ್ರಥಮ ಗ್ರಾಹಕರಾದ ಮಹಾಭಾಲೇಶ್ವರ ಕೆ ಯವರಿಗೆ ಕಾಳು ಮೆಣಸು ರಶೀದಿ ಹಸ್ತಾಂತರ ಮಾಡುವುದರ ಮೂಲಕ ಕೇಂದ್ರವನ್ನು ಆರಂಭಿಸಲಾಯಿತು.

ವಾರದ ಪ್ರತೀ ಮಂಗಳವಾರ ಮತ್ತು ಶುಕ್ರವಾರ ಕಳಂಜದಲ್ಲಿ ಹಾಗೂ ಸೋಮವಾರ ಮತ್ತು ಶನಿವಾರ ಬಾಳಿಲ ಶಾಖೆಯಲ್ಲಿ ಅಡಿಕೆ ಜೊತೆಗೆ ಕಾಳುಮೆಣಸು ಖರೀದಿಸಲಾಗುವುದು.

ಕ್ಯಾoಪ್ಕೋದ ಪುತ್ತೂರು ವಿಭಾಗದ ಪ್ರಾದೇಶಿಕ ಪ್ರಭಂದಕರಾದ ಪ್ರಕಾಶ್ ಶೆಟ್ಟಿ, ನಿಂತಿಕಲ್ ಶಾಖಾ ಪ್ರಭಂದಕರಾದ ರಮೇಶ್. ಡಿ. ಮತ್ತು ಸಿಬ್ಬಂದಿ ರಮೇಶ್ ಕುಮಾರ್ ವಿ, ಕಳಂಜ‌ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಎಂ. ಕೂಸಪ್ಪ ಗೌಡ ಮುಗುಪ್ಪು, ಉಪಾಧ್ಯಕ್ಷ ಕರುಣಾಕರ ಶೆಟ್ಟಿ ನಾಲ್ಗುತ್ತು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮೇಶ್ ನಾಯಕ್ ತಡಗಜೆ, ನಿರ್ದೇಶಕರಾದ ಎನ್. ವಿಶ್ವನಾಥ ರೈ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.