ಕರ್ನಾಟಕ ಸುವರ್ಣ ಸಂಭ್ರಮಾಚರಣೆಯ ಪ್ರಯುಕ್ತ ಜ್ಯೋತಿ ರಥಯಾತ್ರೆ ಸೆ.30ರಂದು ಸುಳ್ಯಕ್ಕೆ

0


ಕನ್ನಡ ಸುವರ್ಣ ಸಂಭ್ರಮಾಚರಣೆ ಅಂಗವಾಗಿ ಜ್ಯೋತಿ ರಥಯಾತ್ರೆ(ಕನ್ನಡ ತೇರು) ರಾಜಾದ್ಯಂತ ಸಂಚರಿಸಲಿದ್ದು,ಸೆ.30ಸೋಮವಾರ ಅಪರಾಹ್ನ ಸುಳ್ಯಕ್ಕೆ ತಲುಪಲಿದೆ.
ರಥಯಾತ್ರೆಯು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಿಂದ ಹೊರಟು ಸೆ.28ರಂದು ಬೆಳ್ತಂಗಡಿ ತಲುಪಲಿದೆ, ಸೆ.29ರಂದು ಕಡಬ, ಸೆ.30ರಂದು ಅಪರಾಹ್ನ ಸುಳ್ಯ ತಲುಪಲಿದೆ.

ಸುಳ್ಯ ತಾಲೂಕು ಸಾಹಿತ್ಯ ಪರಿಷತ್ತು ನೇತೃತ್ವದಲ್ಲಿ ಸಾಮಾಜಿಕ ಸಂಘಟನೆಗಳು ರಥವನ್ನು ಸ್ವಾಗತಿಸಲಿದ್ದು,ಕನ್ನಡಾಭಿಮಾನಿಗಳಾದ ತಾವು ಭಾಗವಹಿಸಿ. ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ತಾಲೂಕು ಕಸಾಪ ಅಧ್ಯಕ್ಷ ಚಂದ್ರಶೇಖರ ಪೇರಾಲು ವಿನಂತಿಸಿದ್ದಾರೆ.