ಅಜ್ಜಾವರ ಚೈತ್ರ ಯುವತಿ ಮಂಡಲ ಅಧ್ಯಕ್ಷೆಯಾಗಿ ಶಶ್ಮಿ ಭಟ್ ಪುನರಾಯ್ಕೆ

0

ಚೈತ್ರ ಯುವತಿ ಮಂಡಲ ಅಜ್ಜಾವರ ಇದರ 2024-25ನೇ ಸಾಲಿನ ನೂತನ ಅಧ್ಯಕ್ಷೆಯಾಗಿ ಶ್ರೀಮತಿ ಶಶ್ಮಿ ಭಟ್ ಹಂಚಿನ ಮನೆ ಮುಂದಿನ 2 ವರ್ಷ ಗಳ ಅವಧಿಗೆ ಪುನರಾಯ್ಕೆಯಾಗಿದ್ದಾರೆ.


ಉಪಾಧ್ಯಕ್ಷರಾಗಿ ಶ್ರೀಮತಿ ಮಾಲತಿ ಸೂರ್ಯ, ಶ್ರೀಮತಿ ಗೀತಾoಜಲಿ ಗುರುರಾಜ್, ಕಾರ್ಯದರ್ಶಿಯಾಗಿ ಕು. ಹರ್ಷಿತಾ ಅಜ್ಜಾವರ, ಜತೆ ಕಾರ್ಯದರ್ಶಿಯಾಗಿ ಶ್ರೀಮತಿ ಉಷಾ ನವೀನ್, ಖಜಾಂಜಿಯಾಗಿ ಕು.ಲಕ್ಷ್ಮೀ ಪಲ್ಲತಡ್ಕ, ಗೌರವ ಸಲಹೆಗಾರರಾಗಿ ಶ್ರೀಮತಿ ಜಯಲಕ್ಷ್ಮೀ ಸಂಜೀವ ರಾವ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಶ್ರೀಮತಿ ಧನಲಕ್ಷ್ಮೀ ಸಂತೋಷ್,ಪತ್ರಿಕಾ ವರದಿಗಾರರಾಗಿ ಕು.ಪವಿತ್ರ ಮಾವಿನಪಳ್ಳ, ಕ್ರೀಡಾ ಕಾರ್ಯದರ್ಶಿಯಾಗಿ ಶ್ರೀಮತಿ ಭವ್ಯ ಭುವನ್ ಅತ್ಯಾಡಿ, ನಿರ್ದೇಶಕರಾಗಿ ಕು. ಹರಿಣಿ ಶಾಂತಿಮಜಲು, ಕು.ಪ್ರೀತಿ ಎನ್ ಅಜ್ಜಾವರ, ಶ್ರೀಮತಿ ವಿಮಲಾರುಣ ಪಡ್ಡoಬೈಲ್, ಶ್ರೀಮತಿ ಪಲ್ಲವಿ ಪ್ರದೀಪ್ ಆಯ್ಕೆಗೊಂಡಿರುತ್ತಾರೆ.

ಪ್ರಾರ್ಥನೆ ಕು. ಧರಿತ್ರಿ, ಕು. ತ್ರಿಷಾ ನೆರವೇರಿಸಿದರು.ಯುವಜನಾ ಸoಯುಕ್ತ ಮಂಡಳಿ ನಿರ್ದೇಶಕ ಗುರುರಾಜ್ ಅಜ್ಜಾವರ, ಯುವಕ ಮಂಡಲ ಗೌರವಸಲಹೆಗಾರರಾದ ಚನಿಯ ಕಲ್ತಡ್ಕ, ಸೂರ್ಯ ಕುಮಾರ್ ಹಾಗೂ ಯುವಕ, ಯುವತಿ ಮಂಡಲದ ಸರ್ವ ಸದಸ್ಯರು ಉಪಸ್ಥಿತರಿದ್ದರು.