ಗುತ್ತಿಗಾರು ಲಯನ್ಸ್ ಕ್ಲಬ್ ವತಿಯಿಂದ ಗಾಂಧಿ ಜಯಂತಿ ಆಚರಣೆ, ಸ್ವಚ್ಚತೆ

0

ಗುತ್ತಿಗಾರು ಲಯನ್ಸ್ ಕ್ಲಬ್ ವತಿಯಿಂದ ಗಾಂಧಿ ಜಯಂತಿ ಆಚರಿಸಲಾಯಿತು. ಲಯನ್ ಅಧ್ಯಕ್ಷರಾದ ಕುಶಾಲಪ್ಪ ತುಂಬುತ್ತಾಜೆ ಗಾಂಧಿ ನಮನ ಮಾಡಿದರು.
ಮೋಹನ್ ಕುಮಾರ್ ಎಂ.ಕೆ ಗಾಂಧಿ ಜಯಂತಿಯ ಮಹತ್ವ ತಿಳಿಸಿದರು ಲಯನ್ ಮೋಹನ್ ಕೆ ಧನ್ಯವಾದ ಮಾಡಿದರು.

ಬಳಿಕ ದೇವಸ್ಥಾನದ ಸುತ್ತ ಮುತ್ತ ಹಾಗೂ ನಡುಗಲ್ಲು ಪೇಟೆ ತನಕ ರಸ್ತೆಯ ಎರಡೂ ಬದಿ ಕಾಡನ್ನು ಗುತ್ತಿಗಾರು ಲಯನ್ ಕ್ಲಬ್ ನ ಸಹಾಯ ಧನದಿಂದ ಪೊದೆ ಸವರುವ ಕೆಲಸ ಮಾಡಿಸಲಾಯಿತು. ಗ್ರಾಮ ಪಂಚಾಯತ್ ಸದಸ್ಯ ವಿಜಯ ಕುಮಾರ್ ಚಾರ್ಮತ, ಶ್ರೀ ಮರಕತ ದೇವಸ್ಥಾನಆಡಳಿತ ಮಂಡಲಿಯ ಮಾಜಿ ಅಧ್ಯಕ್ಷರಾ ಚಂದ್ರಶೇಖರ ಮಾವಿನಕಟ್ಟೆ ಹಾಗೂ ಲಯನ್ಸ್ ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರುಗಳು ಉಪಸ್ಥಿತರಿದ್ದರು.