ಅ. 8 : ಕನಕಮಜಲು ಕನಕದಾಸ ಮಕ್ಕಳ ಭಜನಾ ಮಂಡಳಿ ಇದರ ವಾರ್ಷಿಕ ಸಂಭ್ರಮ ಕಾರ್ಯಕ್ರಮ

0

ಕನಕಮಜಲಿನ ಕನಕದಾಸ ಮಕ್ಕಳ ಭಜನಾ ಮಂಡಳಿ ಇದರ ವಾರ್ಷಿಕ ಸಂಭ್ರಮ ಕಾರ್ಯಕ್ರಮ ಅ. 8ರಂದು ಸಂಜೆ ಕನಕಮಜಲು ಪೆರಂಬಾರಿನ ಮದಿಮಾಳು ಪಾದೆ ಶ್ರೀ ದುರ್ಗಾದೇವಿ ಅಮ್ಮನವರ ಕ್ಷೇತ್ರ ನಡೆಯಲಿದೆ.

ಸಂಜೆ 3.30 ರಿಂದ ಶ್ರೀ ಸ್ವರ್ಣಂಜಲಿ ಮಹಿಳಾ ಭಜನಾ ಮಂಡಳಿ ಕನಕಮಜಲು, ಶ್ರೀ ಆತ್ಮಾರಾಮ ಭಜನಾ ಮಂಡಳಿ ಕನಕಮಜಲು, ಶ್ರೀ ದೀಪಾಂಜಲೀ ಮಹಿಳಾ ಭಜನಾ ಮಂಡಳಿ ಶಾಂತಿನಗರ, ಶ್ರೀ ಕನಕದಾಸ ಮಕ್ಕಳ ಭಜನಾ ಮಂಡಳಿ ಕನಕಮಜಲು ಇವರಿಂದ ಭಜನಾ ಸೇವೆ ನಡೆಯಲಿದೆ.


ಸಂಜೆ 4:30 ರಿಂದ ಮದ್ವಾಧೀಶ ವಿಠಲದಾಸ ನಾಮಾಂಕಿತ ಶ್ರೀಯುತ ರಾಮಕೃಷ್ಣ ಕಾಟುಕುಕ್ಕೆ (ದಾಸ ಸಾಹಿತ್ಯ ಸಂಕೀರ್ತನಕಾರರು) ಇವರ ದಿವ್ಯ ಉಪಸ್ಥಿತಿಯಲ್ಲಿ ‘ಸಮೂಹ ಗಾಯನ’, ಗುರುವಂದನಾ ಕಾರ್ಯಕ್ರಮ ನಡೆದ ಬಳಿಕ ರಾಮಕೃಷ್ಣ ಕಾಟುಕುಕ್ಕೆಯವರಿಂದ- ದಾಸವಾಣಿ ಭಜನಾಮೃತ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.