ನವರಾತ್ರಿ ಸಂದರ್ಭ ವೇಷ ಧರಿಸಿ ಹಣ ಸಂಗ್ರಹ : ವೃದ್ಧೆಗೆ ಆಹಾರ ಸಾಮಾಗ್ರಿ ವಿತರಣೆ

0

ಯುವಕರ ಕಾರ್ಯಕ್ಕೆ ಶ್ಲಾಘನೆ

ನವರಾತ್ರಿ ಸಂದರ್ಭದಲ್ಲಿ ವಿವಿಧ ವೇಷಗಳನ್ನು ಧರಿಸಿ ಹಣ ಸಂಗ್ರಹ ಮಾಡುವುದನ್ನು ಅಲ್ಲಲ್ಲಿ ಕಾಣುತ್ತೇವೆ.‌ಅದೇ ರೀತಿ ಅಜ್ಜಾವರ ಗ್ರಾಮದ ನೆಹರೂನಗರದ ಯುವಕರು ಶ್ರೀ‌ ಮಹಮ್ಮಾಯಿ ಲಯನ್ಸ್ ತಂಡ ಮಾಡಿಕೊಂಡು ನವರಾತ್ರಿ ಸಂದರ್ಭ ಹಣ ಸಂಗ್ರಹ ಮಾಡಿದರು. ಅದರಲ್ಲಿನ ಉಳಿಕೆ ಮೊತ್ತದಿಂದ ನೆಹರುನಗರದ ಐತ್ತೆ ಎಂಬವರ ಮನೆಗೆ ಆಹಾರ ಸಾಮಾಗ್ರಿಗಳನ್ನು ಖರೀದೀಸಿ ವಿತರಣೆ ಮಾಡಿದರು. ಯುವಕರ ಈ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.