ಊರುಬೈಲಿನಿಂದ ಕಾಣೆಯಾಗಿದ್ದ ಬಾಲಕ ಕುಂಬ್ರದಲ್ಲಿ ಪತ್ತೆ

0

ಅ.13ರಂದು ಔಷಧಿಗೆಂದು ಮನೆಯಿಂದ ಹೊರಟು ಬಂದ ಚೆಂಬು ಗ್ರಾಮದ ಊರುಬೈಲಿನ ಹರೀಶ ಹಾಗೂ ಭಾರತಿ ದಂಪತಿಗಳ ಪುತ್ರ ಕುಶಾಂತ್ ಮರಳಿ ಮನೆ ಬಾರದೆ ನಾಪತ್ತೆಯಾಗಿದ್ದು, 15ರಂದು ಪುತ್ತೂರಿನ ಕುಂಬ್ರದಲ್ಲಿ ಪತ್ತೆಯಾಗಿರುವುದಾಗಿ ತಿಳಿದುಬಂದಿದೆ.

ಬಾಲಕ ನಾಪತ್ತೆಯಾಗಿ ಮನೆಗೆ ಸಂಜೆಯಾದರೂ ಬಾರದಿದ್ದುದರಿಂದ ಮನೆಯವರು ಹುಡುಕಾಟ ನಡೆಸಿದ್ದರೂ ಪತ್ತೆಯಾಗಿರಲಿಲ್ಲ. ಇದರಿಂದ ಗಾಬರಿಗೊಂಡ ಮನೆಯವರು ಪೋಲೀಸರಿಗೆ ಮಾಹಿತಿ ನೀಡಿದ್ದರು.

ಅ‌.15ರಂದು ಸಂಜೆ ಬಾಲಕ ಕುಶಾಂತ್ ತಾನು ಕುಂಬ್ರದಲ್ಲಿ ಇರುವುದಾಗಿ ಪೋಷಕರಿಗೆ ಫೋನ್ ಕರೆ ಮಾಡಿ ತಿಳಿಸಿದ್ದು, ಮನೆಯವರು ಕುಂಬ್ರಕ್ಕೆ ತೆರಳಿ ಮನೆಗೆ ಕರೆತಂದಿರುವುದಾಗಿ ತಿಳಿದುಬಂದಿದೆ.