ವಿಟಿಯು ಫೆಸ್ಟ್: ಆಳ್ವಾಸ್ ನ ಎರಡು ನಾಟಕಗಳು ಪ್ರಥಮ

0

ಜೀವನ್ ರಾಂ ನಿರ್ದೇಶನ / ಮನುಜ ನೇಹಿಗನ ಸಂಗೀತ

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿ ಇವರು ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ ಬೆಂಗಳೂರು
ಇಲ್ಲಿ ನಡೆಸಿದ ಅಂತರ್ ಕಾಲೇಜು ಸಾಂಸ್ಕೃತಿಕ ಯುವಜನೋತ್ಸವದಲ್ಲಿ ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಅಭಿನಯಿಸಿದ
ಏಕಾದಶಾನನ ಏಕಾಂಕ ನಾಟಕ ಹಾಗೂ ಮರ ಮತ್ತು ಮಗು ಕಿರುಪ್ರಹಸನ ಎರಡೂ ಪ್ರಥಮ ಪ್ರಶಸ್ತಿಯನ್ನು ಪಡೆದಿರುತ್ತದೆ.

ಶಶಿರಾಜ್ ರಾವ್ ಕಾವೂರು ರಚಿಸಿದ ಏಕಾದಶಾನನವನ್ನು ಡಾ.ಜೀವನ್ ರಾಂ ಸುಳ್ಯ ನಿರ್ದೇಶಿಸಿದ್ದರು. ಮಗು ಮತ್ತು ಮರ ಕಿರು ಪ್ರಹಸನವನ್ನು ರಾಜೇಂದ್ರ ಪ್ರಸಾದ್ ಮಂಡ್ಯ ಹಾಗೂ ಪ್ರಶಾಂತ್ ಕೋಟ ನಿರ್ದೇಶಿಸಿದ್ದರು. ಸಾತ್ವಿಕ್ ನೆಲ್ಲಿತೀರ್ಥ ಮತ್ತು ಮಧುಸೂದನ( ನೀನಾಸಂ) ಕೊಡಗು ಇವರು ರಂಗವಿನ್ಯಾಸ ಮಾಡಿದ್ದರು.
ಎರಡೂ ನಾಟಕಗಳಿಗೆ ಸುಳ್ಯ ರಂಗಮನೆಯ ಆಳ್ವಾಸ್ ಪಿ.ಯು.ವಿದ್ಯಾರ್ಥಿ ಮಾ| ಮನುಜ ನೇಹಿಗ ಸಂಗೀತ ನೀಡಿದ್ದರು.


ರಂಗವಿಭಾಗದ ಸ್ಪರ್ಧೆಯಲ್ಲಿ ಭಾಗವಹಿಸಿದ ವಿಶ್ವೇಶ್ವರಯ್ಯ ತಾಂತ್ರಿಕ ವಿ.ವಿ.ಯ ಸುಮಾರು 36 ನಾಟಕಗಳಲ್ಲಿ ಏಕಾದಶಾನನ ಪ್ರಥಮ ಪ್ರಶಸ್ತಿ ಪಡೆದರೆ, 46 ಕಿರುಪ್ರಹಸನ(ಸ್ಕಿಟ್) ಗಳಲ್ಲಿ ಮಗು ಮತ್ತು ಮರ ನಾಟಕ ಪ್ರಥಮ ಸ್ಥಾನ ಗಳಿಸಿತ್ತು.

ಸಾಧನೆ ಪರಿಶ್ರಮದ ಫಲ ಈ ಪ್ರಶಸ್ತಿಗಳು

ಆಳ್ವಾಸ್ ರಂಗ ಅಧ್ಯಯನ ಕೇಂದ್ರದಲ್ಲಿ ಡಾ.ಜೀವನ್ ರಾಂ ಸುಳ್ಯರಿಂದ ತರಬೇತುಗೊಂಡ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿ ಕಲಾವಿದರು ಈಗಾಗಲೇ ರಾಷ್ಟ್ರೀಯ ಮಟ್ಟದಲ್ಲಿ 12 ಬಾರಿ ಪ್ರಶಸ್ತಿ ಪಡೆದಿರುವುದು ಒಂದು ದಾಖಲೆಯಾಗಿದೆ.
ಶಿಕ್ಷಣದ ಜೊತೆ ಜೊತೆಗೇ ರಂಗಕಲೆಯ ಕಠಿಣ ಅಭ್ಯಾಸ ಮಾಡುವ, ನಿರ್ದೇಶಕರ ರಂಗಬದ್ಧತೆ,ವಿದ್ಯಾರ್ಥಿಗಳ ಪರಿಶ್ರಮದ ಪಲವೇ ಈ ಪ್ರಶಸ್ತಿ. ವಿದ್ಯಾರ್ಥಿಗಳ ಬಗ್ಗೆ ಹೆಮ್ಮೆ ಅನಿಸುತ್ತದೆ. ಎಲ್ಲರಿಗೂ ಅಭಿನಂದನೆಗಳು.
——- ಡಾ.ಎಂ.ಮೋಹನ ಆಳ್ವ