ಮಂಗಳೂರು ಸ್ವರೂಪ ಅಧ್ಯಯನ ಕೇಂದ್ರದ 8ನೇ ತರಗತಿ ವಿದ್ಯಾರ್ಥಿ, ಮೂಲತಹ ಬಾಳುಗೋಡು ಗ್ರಾಮದ ಮಿತ್ತಡ್ಕದ ಜನನ್ ಮಿತ್ತಡ್ಕ ಅವರು 84,246 ಸಂಖ್ಯೆಗಳಲ್ಲಿ ಭಗವದ್ಗೀತೆಯ 700 ಶ್ಲೋಕಗಳನ್ನು 1,400 ಸಾಲುಗಳಲ್ಲಿ ಬರೆದು ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲೆ ನಿರ್ಮಾಣ ಮಾಡಿದ್ದಾರೆ.
ಹರಿಯಾಣದ ಫರೀದಾಬಾದ್ನಲ್ಲಿರುವ ಐಬಿಆರ್ ಸಂಸ್ಥೆಯವರು ಈ ಸಂಖ್ಯಾಚಿತ್ರ ಗಮನಿಸಿ ಇದೊಂದು ವಿಶೇಷ ಸಾಧ್ಯತೆ ಎಂದು ಪರಿಗಣಿಸಿ ವಿಶ್ವದಾಖಲೆ ಪ್ರಶಸ್ತಿಯನ್ನು ಘೋಷಿಸಿರುವುದಾಗಿ ತಿಳಿದು ಬಂದಿದೆ.
ಜನನ್ ಈಗಾಗಲೇ ಒಂದೇ ತಿಂಗಳಲ್ಲಿ ಎಸ್. ಎಸ್.ಎಲ್.ಸಿ ಸ್ಟೇಟ್ ಸಿಲಬಸ್ ಪೋರ್ಶನ್ ಮುಗಿಸಿಕೊಂಡು ಆರು ವಿಷಯಗಳ ಪೂರ್ಣ ಪಠ್ಯ ವಿಷಯಗಳನ್ನು ಚಿತ್ರದ ಮೂಲಕ ತನ್ನ ಅಂಗಿ, ಪ್ಯಾಂಟ್ನಲ್ಲಿ ಬರೆದು ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುವಷ್ಟು ಅರ್ಹತೆ ಪಡೆದಿದ್ದುಮತ್ತೊಂದು ವಿಶ್ವ ದಾಖಲೆ ಮಾಡಲು ಸಿದ್ಧರಾಗಿದ್ದಾರೆ.
784 ಜಿಲ್ಲೆಗಳ ಹೆಸರು ಕಂಠಪಾಠ:
ದೇಶದ 784 ಜಿಲ್ಲೆಗಳ ಹೆಸರುಗಳನ್ನು ನಿರರ್ಗಳವಾಗಿ ಹೇಳುವ ಜನನ್ ಮೂರು ರಬ್ಬರ್ ಬಾಲ್ಗಳನ್ನು ಜಗ್ಲಿಂಗ್ ಮಾಡುತ್ತಾ ನಿರರ್ಗಳವಾಗಿ ಹೇಳುವ ಅಭ್ಯಾಸ ಮಾಡುತ್ತಿದ್ದಾರೆ. ಸಂಗೀತ, ಚಿತ್ರಕಲೆ, ಬೀಟ್ ಬಾಕ್ಸ್, ಮಿಮಿಕ್ರಿ, ಸ್ವರೂಪ ಸಂಕೇತ ಭಾಷೆಗಳು, ತ್ರಯೋದಶ ಅವಧಾನ ಪ್ರದರ್ಶನ ಕಲೆಗಳಲ್ಲಿ ಸಾಧನೆ ಮಾಡಿದ್ದಾರೆ.
ಜನನ್ ರ ತಂದೆ ವಸಂತ ಅವರು ಬೆಂಗಳೂರಿನಲ್ಲಿ ಸಿವಿಲ್ ಎಂಜಿನಿಯರ್ ಆಗಿದ್ದು ಮೂಲತಹ ಬಾಳುಗೋಡು ಮಿತ್ತಡ್ಕದವರು. ತಾಯಿ ಭವಾನಿ ಗ್ರಂಥಪಾಲಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.