ಆಲೆಟ್ಟಿ ಪತ್ತುಕುಂಜ ದಲ್ಲಿ ಬೃಂದಾ’ಸ್ ನ್ಯಾಚುರಲ್ ಸೋಪ್ ಮತ್ತು ಕಾಸ್ಮೆಟಿಕ್ ಉತ್ಪನ್ನಗಳ ತಯಾರಿಕಾ ಘಟಕ ಶುಭಾರಂಭ

0

ಆಲೆಟ್ಟಿ ಗ್ರಾಮದ ಪತ್ತುಕುಂಜದಲ್ಲಿ ಶ್ರೀಮತಿ ರಶ್ಮಿ ಗಣೇಶ್ ರವರ ಮಾಲಕತ್ವದ ಬೃಂದಾ’ಸ್ ನ್ಯಾಚುರಲ್ ಸೋಪ್ ಮತ್ತು ಕಾಸ್ಮೆಟಿಕ್ ನೂತನ ತಯಾರಿಕಾ ಘಟಕವು ಮೇ.3 ರಂದು ಉದ್ಘಾಟನೆ ಗೊಂಡಿತು.

ಬೃಂದಾ’ಸ್ ನ್ಯಾಚುರಲ್ ಘಟಕವನ್ನು
ಮಾಜಿ ವಿಧಾನ ಪರಿಷತ್ ಸದಸ್ಯ ಅಣ್ಣಾ ವಿನಯಚಂದ್ರ ರವರು ಉದ್ಘಾಟಿಸಿದರು. ನಿವೃತ್ತ ಅಪರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ಸುಂದರ ನಾಯ್ಕ್ ಐ.ಎಫ್.ಎಸ್ , ಕಚೇರಿಯನ್ನು ಉದ್ಘಾಟಿಸಿದರು. ಕೆ.ವಿ.ಜಿ.ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ.ಲೀಲಾಧರ್ ಡಿ.ವಿ ದೀಪ ಪ್ರಜ್ವಲಿಸಿದರು. ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ ಅಧ್ಯಕ್ಷತೆ ವಹಿಸಿದ್ದರು. ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ ರವರು ತಯಾರಿಕಾ ಘಟಕವನ್ನು ಉದ್ಘಾಟಿಸಿದರು. ಮುಖ್ಯ ಅಭ್ಯಾಗತರಾಗಿ ಹಿರಿಯ ಆಯುರ್ವೇದ ತಜ್ಞ ಡಾ.ಗಿರೀಶ್, ಶಾರದಾಂಬಾ ವಿದ್ಯಾ ಸಂಸ್ಥೆಯ ಮ್ಯಾನೇಜರ್ ಶ್ರೀಮತಿ ಶಾರದಾ ವೈ,
ಬ್ಯಾಂಕ್ ಆಫ್ ಬರೋಡಾ ಸುಳ್ಯ ಶಾಖೆಯ ವ್ಯವಸ್ಥಾಪಕ ಅಶೋಕ್ ವಿಮನ್, ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎನ್.ಎ. ರಾಮಚಂದ್ರ, ಸುಳ್ಯ ಟಿ.ಎ.ಪಿ.ಸಿ.ಎಂ.ಎಸ್ ಮಾಜಿ ಅಧ್ಯಕ್ಷ ತೇಜಕುಮಾರ್ ಬಡ್ಡಡ್ಕ,
ಆಲೆಟ್ಟಿ ಪಂಚಾಯತ್ ಸದಸ್ಯರಾದ ಸತ್ಯಕುಮಾರ್ ಆಡಿಂಜ, ಶ್ರೀಮತಿ ಶಶಿಕಲಾ ದೋಣಿ ಮೂಲೆ, ಶ್ರೀಮತಿ ಭಾಗೀರಥಿ ಪತ್ತುಕುಂಜ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನೂತನ ಘಟಕದ ಉತ್ಪನ್ನಗಳನ್ನು ಅತಿಥಿಗಳು ಮಾರುಕಟ್ಟೆಗೆ ಬಿಡುಗಡೆ ಮಾಡಿದರು.

ಯುವ ಭಾಗವತ ಪ್ರವೀಣ್ ಆಲೆಟ್ಟಿ ಯವರು ಯಕ್ಷಗಾನ ಶೈಲಿಯ ಗಣಪತಿ ಸ್ತುತಿಯೊಂದಿಗೆ ಕಾರ್ಯಕ್ರಮಕ್ಕೆ ‌ಚಾಲನೆ ನೀಡಿದರು.
ಬೇಬಿ| ಬೃಂದಾ ಮತ್ತು ಬೇಬಿ| ಪೂರ್ವಿ ಪ್ರಾರ್ಥಿಸಿದರು.
ಪ್ರಾಸ್ತಾವಿಕ ಮಾತಿನೊಂದಿಗೆ ಅರ್.ಅರ್.ಫಾರ್ಮ್ಸ್ ಮಾಲಕ‌ ನ್ಯಾಯವಾದಿ ರಮೇಶ್ ರಾವ್ ಪತ್ತುಕುಂಜ ಸ್ವಾಗತಿಸಿದರು. ಬೃಂದಾ’ಸ್ ಮಾಲಕಿ ಶ್ರೀಮತಿ ರಶ್ಮಿ ಗಣೇಶ್ ವಂದಿಸಿದರು.
ಪಿ.ಡಿ.ಒ ದಯಾನಂದ ಪತ್ತುಕುಂಜ ಮತ್ತು ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಈ ಸಂದರ್ಭದಲ್ಲಿ ವಿಶೇಷವಾಗಿ ರಮೇಶ್ ರಾವ್ ರವರ ಪುತ್ರ ರಾಹುಲ್ ರಾವ್ ಮತ್ತು ಅಲಕಾ ರವರ ವಿವಾಹದ ಗೃಹ ಪ್ರವೇಶದ ಪ್ರಯುಕ್ತ ಗಣಪತಿ ಹವನ‌ ಮತ್ತು ಸತ್ಯನಾರಾಯಣ ಪೂಜೆಯೊಂದಿಗೆ ಅರತಕ್ಷತೆಯು ನಡೆಯಿತು.
ಕುಟುಂಬಸ್ಥರು ಹಾಗೂ ಬಂಧು ಮಿತ್ರರು ಆಗಮಿಸಿದ್ದರು. ಆಗಮಿಸಿದ ಎಲ್ಲರಿಗೂ ಮಧ್ಯಾಹ್ನ ಭೋಜನದ ವ್ಯವಸ್ಥೆ ಮಾಡಲಾಗಿತ್ತು.