ಸುಬ್ರಹ್ಮಣ್ಯ – ಮಂಜೇಶ್ವರ ಹೆದ್ದಾರಿಯ ಬದಿಯ ಪೊದೆಗಳನ್ನು ತೆರವುಗೊಳಿಸುವಂತೆ ಹಮೀದ್ ಮರಕ್ಕಡರಿಂದ‌ ಪಿಡಬ್ಲೂಡಿ ಗೆ ಮನವಿ

0

ಸುಬ್ರಹ್ಮಣ್ಯ-ಮಂಜೇಶ್ವರ ರಾಜ್ಯ ಹೆದ್ದಾರಿಯುದ್ದಕ್ಕೂ ಪಡ್ಪನಂಗಡಿ, ಕರಿಕ್ಕಳ, ಪಂಜ ಭಾಗಗಳಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಪೊದೆಗಳು ಬೆಳೆದಿರುವುದು ಮತ್ತು ಅಲ್ಲಲ್ಲಿ ಗುಂಡಿಗಳಿರುವುದರಿಂದ ದಾರಿಹೋಕರಿಗೆ ತೊಂದರೆಯಾಗುತ್ತಿದ್ದು, ಕೂಡಲೆ ಕ್ರಮ ವಹಿಸಬೇಕೆಂದು ಹಮೀದ್ ಮರಕ್ಕಡ ಇಲಾಖೆಗೆ ಕಲ್ಮಡ್ಕ ಪಂಚಾಯತ್ ಮೂಲಕ ಮನವಿ ನೀಡಿದ್ದಾರೆ.

ಪಡ್ಪನಂಗಡಿ ಬಳಿ ಸೂಕ್ತ ಚರಂಡಿ ವ್ಯವಸ್ಥೆಯೂ ಇಲ್ಲ.

ರಸ್ತೆಯಲ್ಲಿ ನೀರು ಶೇಖರಣೆಗೊಂಡು ವಿದ್ಯಾರ್ಥಿಗಳು ನಡೆದುಕೊಂಡು ಹೋಗುವಾಗ ವಾಹನಗಳು ಬಂದರೆ ಕೆಂಪು ನೀರಿನ ಅಭಿಷೇಕವಾಗುತ್ತಿದೆ.

ವಿದ್ಯಾರ್ಥಿನಿಯರು ಮತ್ತೆ ಮನೆಗೆ ಹೋಗಿ ಬಟ್ಟೆ ಬದಲಾಯಿಸಿ ಶಾಲೆಗೆ ತೆರಳಿದ ಘಟನೆಯೂ ನಡೆದಿದೆ. ಸಂಬಂಧಿಸಿದ ಇಲಾಖೆ ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಮನವಿಯಲ್ಲಿ ವಿನಂತಿಸಿದ್ದಾರೆ.