ಏನೆಕಲ್ಲು : ಶ್ರೀ ಆದಿಶಕ್ತಿ ಭಜನಾ ಮಂದಿರದ ನೂತನ ಆಡಳಿತ ಮಂಡಳಿ ರಚನೆ

0


ಏನೆಕಲ್ಲು ಶ್ರೀ ಆದಿಶಕ್ತಿ ಭಜನಾ ಮಂದಿರದ ನೂತನ ಆಡಳಿತ ಮಂಡಳಿಯನ್ನು ಜು. 7 ರಂದು ರಚನೆ ಮಾಡಲಾಯಿತು. ಭಜನಾ ಮಂದಿರದ ಅಧ್ಯಕ್ಷ ಗಿರಿಯಪ್ಪ ಗೌಡ ಬಾಲಾಡಿಯವರ ಅಧ್ಯಕ್ಷತೆಯಲ್ಲಿ ಸಭೆ ನಡೆದು, ಆಯ್ಕೆ ಪ್ರಕ್ರಿಯೆ ನಡೆಯಿತು.


ನೂತನ ಅಧ್ಯಕ್ಷರಾಗಿ ಲಕ್ಷ್ಮಣ ಗೌಡ ಸಂಕಡ್ಕ, ಪ್ರಧಾನ ಕಾರ್ಯದರ್ಶಿಯಾಗಿ ಹವೀನ್ ಬಾಲಾಡಿ, ಉಪಾಧ್ಯಕ್ಷರಾಗಿ ಜನಾರ್ಧನ ಗೌಡ ಕಟ್ಟ ಆಯ್ಕೆಯಾದರು.

ಸದಸ್ಯರಾಗಿ ರತಿಕ ಕುಮಾರ ಪುರ್ಲುಪ್ಪಾಡಿ, ನಳಿನಾಕ್ಷಿ ಮುರಳೀಧರ ಬಾಲಾಡಿ, ರಕ್ಷಿತ್ ಪರಮಲೆ, ಗಿರೀಶ್ ಪದ್ನಡ್ಕ, ಕಾರ್ಯಪ್ಪ ಗೌಡ ಪೂಜಾರಿಮನೆ, ಪ್ರಹ್ಲಾದ್ ಕೆಯ್ಯಳಾ, ಸಚಿನ್ ಕುಕ್ಕಪ್ಪನಮನೆ, ವಿಶ್ವನಾಥ ಬಾಲಾಡಿ, ಮೋಹನ್ ಗೌಡ ಕೋಟಿಗೌಡನ ಮನೆ, ಕುಸುಮಾಧರ ಬಾಲಾಡಿಯವವರು ಆಯ್ಕೆಯಾದರು.