ಆ.31: ಬಡ್ಡಡ್ಕ ಅಯ್ಯಪ್ಪ ಭಜನಾ ಮಂದಿರದಲ್ಲಿ ಗಣೇಶ ಚತುರ್ಥಿ ಆಚರಣೆ

0

ಬಡ್ಡಡ್ಕ ಅಮರ ಕ್ರೀಡಾ ಕಲಾ ಸಂಘ ,ಶ್ರೀ ಅಯ್ಯಪ್ಪ ಸೇವಾ ಸಮಿತಿ ಬಡ್ಡಡ್ಕ ಕಲ್ಲಪಳ್ಳಿ ಇದರ ಆಶ್ರಯದಲ್ಲಿ ಆ.31 ರಂದು ಬಡ್ಡಡ್ಕ ಶ್ರೀ ಅಯ್ಯಪ್ಪ ಭಜನಾ ಮಂದಿರದ ವಠಾರದಲ್ಲಿ ಶ್ರೀ ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಭಜನಾ ಕಾರ್ಯಕ್ರಮ ಮತ್ತು ‌ಮಕ್ಕಳಿಗೆ ವಿವಿಧ ಅಟೋಟ ಸ್ಪರ್ಧೆಗಳು ನಡೆಯಲಿರುವುದು.
ಬೆಳಗ್ಗೆ ಗಂಟೆ 10.00 ರಿಂದ ಮಧ್ಯಾಹ್ನದ ತನಕ‌ ಸ್ಥಳೀಯ ಭಜಕರಿಂದ ‌ಭಜನಾ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ ಮಹಾಪೂಜೆಯಾಗಿ ಪ್ರಸಾದ ವಿತರಣೆ ಮತ್ತು ‌ಸಾರ್ವಜನಿಕ ಅನ್ನ ಸಂತರ್ಪಣೆಯಾಗಲಿದೆ. ಈ ಸಂದರ್ಭದಲ್ಲಿ ಮಕ್ಕಳಿಗೆ ವಿವಿಧ ಅಟೋ ಟ ಸ್ಪರ್ಧೆಗಳನ್ನು ಏರ್ಪಡಿಸಲಾಗುವುದು‌ ಎಂದು ಸಮಿತಿ ಅಧ್ಯಕ್ಷ ರು ತಿಳಿಸಿರುತ್ತಾರೆ.