ಚೆಂಬು : ಆನ್ಯಾಳ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲ

0

ಚೆಂಬು ಗ್ರಾಮದ ಆನ್ಯಾಳದಲ್ಲಿ ಐದು ವರ್ಷಕ್ಕೊಮ್ಮೆ ನಡೆಯುವ ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲವು ಜ. 3 ಮತ್ತು 4 ರಂದು ನಡೆಯಿತು.

ಜ.3 ರಂದು ರಾತ್ರಿ ತೊಡಙಲು ನಡೆದು, ಮೇಲೆರಿಗೆ ಅಗ್ನಿ ಸ್ಪರ್ಶ ನಡೆಯಿತು. ರಾತ್ರಿ 12.3೦ ಕ್ಕೆ ಕುಲ್ಚಾಟ ಹೊರಟು, ಜ.4 ರಂದು ಬೆಳಿಗ್ಗೆ ಅಗ್ನಿಪ್ರವೇಶದ ಬಳಿಕ ಹರಕೆ ಮತ್ತು ಪ್ರಸಾದ ವಿತರಣೆ ನಡೆಯಿತು.

ಪೂರ್ವಾಹ್ನ 11 ಕ್ಕೆ ಮಾರಿಕಳ ಪ್ರವೇಶದ ಬಳಿಕ ಅನ್ನಸಂತರ್ಪಣೆ ನಡೆಯಿತು.

ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಅಧ್ಯಕ್ಷ ಸೋಮಣ್ಣ ಬಾಲೆಂಬಿ, ಕಾರ್ಯದರ್ಶಿ ಸೋಮಣ್ಣ ಮಾಸ್ತರ್, ಸದಸ್ಯರು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪರಿವಾರ ಸೋಮಣ್ಣ, ಕಾರ್ಯದರ್ಶಿ ಹೊಸೂರು ಕಿರಣ್ ಮತ್ತು ಸದಸ್ಯರು, ಮುಖ್ಯಸ್ಥರಾದ ಬಾಲೆಂಬಿ ಜನಾರ್ದನ, ಅಡಿಗಾರ ಜಯರಾಮ, ಬಂಗಾರಕೋಡಿ ಚೆನ್ನಪ್ಪ, ಕಾಚೆಲು ಪೊನ್ನಪ್ಪ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.