ಅಜ್ಜಾವರ : ಮಕರ ಸಂಕ್ರಾಂತಿ ಕಾರ್ಯಕ್ರಮ

0

ಧನಲಕ್ಷ್ಮೀ ಮಹಿಳಾ ಮಂಡಲ ಅಜ್ಜಾವರ ಇದರ ವತಿಯಿಂದ ಶ್ರೀ ಶಂಕರ ಭಾರತಿ ವೇದ ಪಾಠ ಶಾಲೆ ಅಜ್ಜಾವರದಲ್ಲಿ ಮಕರ ಸಂಕ್ರಾಂತಿ ಕಾರ್ಯಕ್ರಮವು ಜ.15ರಂದು ನಡೆಯಿತು. ಕಾರ್ಯಕ್ರಮವನ್ನು ಶ್ರೀ ಮಹಿಷಮರ್ದಿನೀ ದೇವಾಸ್ಥಾನ ಅಜ್ಜಾವರ ಇದರ ಧರ್ಮದರ್ಶಿ
ಭಾಸ್ಕರ್ ರಾವ್ ಬಯಂಬು ದೀಪ ಬೆಳಗಿಸಿ ಉದ್ಘಾಟಿಸಿದರು.
ಶ್ರೀ ಶಾಸ್ತಾವೇಶ್ವರ ದೇವಾಸ್ಥಾನ ಕರ್ಲಪ್ಪಾಡಿ ಇದರ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರಾಜೇಶ ಶೆಟ್ಟಿ ಮೇನಾಲ
ಇವರು ಬೌದ್ದಿಕ್ ನಡೆಸಿ ಕೊಟ್ಟರು. ವೇದಿಕೆಯಲ್ಲಿ ಧನಲಕ್ಷ್ಮೀ ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀಮತಿ ನಳಿನಾಕ್ಷಿ ಅಡ್ಪಂಗಾಯ, ವರಮಹಾಲಕ್ಷ್ಮಿ ಪೂಜಾ ಸಮಿತಿ ಅಧ್ಯಕ್ಷೆ ಶ್ರೀಮತಿ ಮನೋರಮಾ ಪಡಂಬೈಲ್, ಮಹಿಳಾ ಮಂಡಲದ ಗೌರವ ಅಧ್ಯಕ್ಷೆ ಶ್ರೀಮತಿ ಶಶ್ಮಿ ಭಟ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮೋಹಿನಿ ಪ್ರಾರ್ಥಿಸಿ,
ಧನಲಕ್ಷ್ಮೀ ಮಹಿಳಾ ಮಂಡಲ ದ ಕಾರ್ಯದರ್ಶಿ ವಿಶಾಲ ಸೀತಾರಾಮ ನಿರೂಪಣೆ ಮಾಡಿದರು. ವಿಮಲಾ ಅರುಣ ಸ್ವಾಗತಿಸಿದರು. ವೇದಾವತಿ ಬಾಲಚಂದ್ರ ಅಡ್ಪಂಗಾಯ ವಂದಿಸಿದರು. ಎಲ್ಲಾರಿಗೂ ಎಳ್ಳು ಬೆಲ್ಲ ನೀಡಲಾಯಿತು.