ತೊಡಿಕಾನ : ಕುದುರೆಪಾಯ ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆ

0

ಸಮಾಜ ಕಲ್ಯಾಣ ಇಲಾಖೆಯ ರೂ 10 ಲಕ್ಷ ಮತ್ತು ಸಚಿವ ಅಂಗಾರರ ವಿಶೇಷ ಅನುದಾನ ರೂ.3 ಲಕ್ಷ ದಲ್ಲಿ ಕುದುರೆಪಾಯ ಮಾಪಳಕಜೆ ಎಸ್ .ಟಿ ಮನೆಗಳ ಸಂಪರ್ಕ ರಸ್ತೆ ಅಭಿವ್ರದ್ದಿಗೆ ಪೆರಂಬಾರು ಬಳಿ ರಸ್ತೆ ಕಾಂಕ್ರೀಟಿಕರಣಕ್ಕೆ ಬಿಜೆಪಿ ಶಾಸಕಾಂಗ ಪಕ್ಷದ ಕಾರ್ಯದರ್ಶಿ ಸಿ.ಟಿ ಸುರೇಶ್ ಮತ್ತು ಸುಳ್ಯ ಬಿಜೆಪಿ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ ಅವರು ಜ.28 ರಂದು ಗುದ್ದಲಿ ಪೂಜೆ ನೆರವೇರಿಸಿದರು.


ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷೆ ಹರಿಣಿ ದೇರಾಜೆ,ಸುಳ್ಯ ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ದೀಪಕ್ ಕುತ್ತಮೊಟ್ಟೆ,ಅರಂತೋಡು ತೊಡಿಕಾನ ಪ್ರಾಥಮಿಕ ಕ್ರಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ನಿರ್ದೇಶಕ ವಿಜೇತ್ ಮರುವಳ,ಸಂತೋಷ್ ಚಿಟ್ಟನ್ನೂರು,ಗ್ರಾಮ ಪಂಚಾಯತ್ ಸದಸ್ಯರಾದ ಭವಾನಿ ಚಿಟ್ಡನ್ನೂರು,ವೆಂಕಟ್ರಮಣ ಪೆತ್ತಾಜೆ,ಕೇಶವ ಅಡ್ತಲೆ,ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕಿಶೋರ್ ಕುಮಾರ್,ಭಜನಾ ಸಂಘದ ಅಧ್ಯಕ್ಷ ಚಂದ್ರಶೇಖರ ಆಚಾರ್ಯ, ಮಾಜಿ ಅಧ್ಯಕ್ಷ ಜನಾರ್ದನ ಬಾಳಕಜೆ,ಬಿಜೆಪಿ ಭೂತ್ ಸಮಿತಿ ಅಧ್ಯಕ್ಷ ಪ್ರಶಾಂತ್ ,ಕಾರ್ಯದರ್ಶಿ ಶಿವಪ್ರಸಾದ್ ಕುಂದಲ್ಪಾಡಿ,ಸಿ.ಟಿ ಚಿನ್ನಪ್ಪ,ಗೋಪಾಲಕ್ರಷ್ಣಗುಂಡಿಗದ್ದೆ,ರಾಮಕ್ರಷ್ಣ ಕೆಮ್ಮಾರ,ಸುಲೋಚನ,ಭವಿತ್ ಬಾಳಕಜೆ,ಜನರ್ದಾನ ಮುಪ್ಪಸೇರು,ಜನಾರ್ದನ ಗುಂಡ್ಯ,ಸರಸ್ವತಿ ಪೆರಂಬಾರು ಹಾಗೂ ಇತರರು ಉಪಸ್ಥಿರಿದ್ದರು.


ಸಮಾಜ ಕಲ್ಯಾಣ ಇಲಾಖೆಯ ಅನುದಾನ ಮಂಜುರಾತಿಗೆ ವಿರಾಜಪೇಟೆ ಶಾಸಕ ಕೆ.ಜಿ ಬೋಪಯ್ಯ ಶಿಫಾರಸಿನ ಸುರೇಶ್ ಸಿ.ಟಿ ಶ್ರಮಿಸಿದ್ದರು.ಸಿ.ಟಿ ಸುರೇಶ್
ಹಿಂದೆ ಕುದುರೆಪಾಯಯ ಮಾಪಳಕಜೆ ಭಾಗಕ್ಕೆ ಸಂಪರ್ಕ ಕಲ್ಪಿಸುವ ಅಜ್ಜಿಹೊಳೆಗೆ ಸೇತುವೆ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೆ ಶ್ರಮಿಸಿದ್ದರು