ಪಂಜ: ಪ್ರಾಮಾಣಿಕತೆ ಮೆರೆದ ರಿಕ್ಷಾ ಚಾಲಕ

0

ರಿಕ್ಷಾದಲ್ಲಿ ಬಿದ್ದು ಸಿಕ್ಕ ಚಿನ್ನದ ಸರವನ್ನು ರಿಕ್ಷಾ ಚಾಲಕ ವಾರಿಸುದಾರಿಗೆ ಹಿಂದಿರುಗಿಸಿ ಪ್ರಾಮಾಣಿಕತೆಯಿಂದ
ಮೆರೆದ ಘಟನೆ ಮಾ.2 ರಂದು ವರದಿಯಾಗಿದೆ.

ಮಾ.1 ರಂದು ಪಂಜದಿಂದ ದೇವಪ್ಪ ಏನೆಕಲ್ಲುರವರ ರಿಕ್ಷಾ ಕೋಡಿಂಬಾಳಕ್ಕೆ
ಬಾಡಿಗೆಗೆ ಹೋಗಿತ್ತು. ರಿಕ್ಷಾ ಬಾಡಿಗೆ ಮುಗಿಸಿ ಪಂಜಕ್ಕೆ ಬಂದಾಗ ರಿಕ್ಷಾದಲ್ಲಿ ಚಿನ್ನದ‌ ಮಾಂಗಲ್ಯ ಸರವೊಂದು ಬಿದ್ದು ಸಿಕ್ಕಿತ್ತು.
ಕಡಬ ತಾಲೂಕಿನ ಕೋಡಿಂಬಾಳ
ಸೆಫಿಯಾ ಎಂಬವರದಾಗಿದ್ದು,
ಮಾ.2 ಅವರ ಮನೆಯವರಿಗೆ
ಚಿನ್ನದ ಸರವನ್ನು ಹಸ್ತಾಂತರಿಸಿ ಪ್ರಾಮಾಣಿಕತೆಯಿಂದ ಮೆರೆದಿದ್ದಾರೆ.
ಬಿದ್ದು ಸಿಕ್ಕಿದ ಚಿನ್ನದ ಸರ ಸುಮಾರು 2 ಲಕ್ಷ ರೂ.ಮೌಲ್ಯದು ಎನ್ನಲಾಗಿದೆ.
ದೇವಪ್ಪ ಏನೆಕಲ್ಲುರವರು ಬಿ ಎಂ ಎಸ್ ಸಂಯೋಜಿತ ಪಂಜ ಆಟೋ ರಿಕ್ಷಾ ಚಾಲಕರ ಸಂಘದ ಪೂರ್ವಾಧ್ಯಕ್ಷ ಮತ್ತು ಸಕ್ರೀಯ‌ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.