ನಿವೃತ್ತ ಯೋಧರಿಗೆ ಸನ್ಮಾನ ಹಾಗೂ ರೋಟರಿ ರಾಷ್ಟ್ರಭಕ್ತಿ ಅಭಿಯಾನ

0

ದೇಶಕ್ಕಾಗಿ ಹೋರಾಡಿದ ವೀರಯೋಧರನ್ನು ಗೌರವಿಸುವ ಮೂಲಕ ರಾಷ್ಟ್ರ ಭಕ್ತಿಯನ್ನು ಹೆಚ್ಚಿಸಲು ನಾವೆಲ್ಲ ಪಣ ತೊಡಬೇಕು ಎಂದು ರೋಟರಿ ಜಿಲ್ಲಾ ಗವರ್ನರ್ ರೊ. ಪ್ರಕಾಶ್ ಕಾರಂತ್ ಅವರು ರೈಡ್ ಫಾರ್ ರೋಟರಿ ಹಾಗೂ ರಾಷ್ಟ್ರ ಭಕ್ತಿ ಅಭಿಯಾನ ಕಾರ್ಯಕ್ರಮದಲ್ಲಿ ತಿಳಿಸಿ ಮಾತನಾಡಿದರು.
ರೋಟರಿ ಕ್ಲಬ್ ಸುಳ್ಯ ಹಾಗೂ ರೋಟರಿ ಸಿಟಿ ಸುಳ್ಯ ಇದರ ಸಹಯೋಗದ ಈ ಕಾರ್ಯಕ್ರಮದಲ್ಲಿ ನಿವೃತ್ತ ಯೋಧರಾದ ಚಂದ್ರಶೇಖರ್ ಪಿ ಹಾಗೂ ಗುರುಪ್ರಸಾದ್ ರೈ ಪಿ ಜಿ ಇವರನ್ನು ರೋ ಪ್ರಕಾಶ್ ಕಾರಂತ್ ಅವರು ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ನಿಯೋಜಿತ ಗವರ್ನರ್ ರೊ ವಿಕ್ರಂ ದತ್ತ, ಜಿಲ್ಲಾ ಸಂಯೋಜಕ ಶ್ರೀಕಾಂತ ಶೆಟ್ಟಿ, ಕಾರ್ಯಕ್ರಮ ಸಂಯೋಜಕ ಸತೀಶ್ ಬೋಳಾರ್, ಅಸಿಸ್ಟಂಟ್ ಗವರ್ನರ್ ಶಿವರಾಮ್ ಏನೇಕಲ್, ವಲಯ ಸೇನಾನಿ ಪ್ರೀತಂ ಡಿ ಕೆ ಇವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಅಧ್ಯಕ್ಷತೆಯನ್ನು ರೋಟರಿ ಅಧ್ಯಕ್ಷ ಚಂದ್ರಶೇಖರ್ ಪೇರಾಲ್ ಇವರು ವಹಿಸಿದ್ದರು. ಸಭೆಯಲ್ಲಿ ರೋಟರಿ
ಬೈಕಂಪಾಡಿ ಅಧ್ಯಕ್ಷ ಅಶೋಕ ಎನ್ ಹಾಗೂ ರೋಟರಿ ಸಿಟಿ ಕಾರ್ಯದರ್ಶಿ ಶಿವಪ್ರಸಾದ್ ಉಪಸ್ಥಿತರಿದ್ದರು. ರೋಟರಿ ಸಿಟಿ ಅಧ್ಯಕ್ಷ ಮುರಳೀಧರ ರೈ ಸ್ವಾಗತಿಸಿದರು. ರೋಟರಿ ಕಾರ್ಯದರ್ಶಿ ಮಧುರಾ ಎಂ ಆರ್ ವಂದಿಸಿದರು.