ಯೇನೆಕಲ್ ಸೊಸೈಟಿ ಸ್ಥಳ ಖಾಸಗಿಯವರಿಂದ ಅತಿಕ್ರಮಣದ ಆರೋಪ

0

ಸರ್ವೆ ನಡೆಸಿ ತೆರವುಗೊಳಿಸುವಾಗ ಜೆ.ಸಿ.ಬಿ.ಯಡಿ ಕುಳಿತು ತಡೆಯೊಡ್ಡಿದ ಖಾಸಗಿ ವ್ಯಕ್ತಿ

ನ್ಯಾಯಕ್ಕಾಗಿ ಆಗ್ರಹಿಸಿ ಊರವರಿಂದ ರಸ್ತೆ ತಡೆ

ಪೋಲೀಸ್, ತಹಶೀಲ್ದಾರ್ ಆಗಮಿಸಿ ಜೆ.ಸಿ.ಬಿ. ಮೂಲಕ ಅತಿಕ್ರಮಣ ತೆರವು

ಯೇನೆಕಲ್ ಸೊಸೈಟಿಯ 15 ಸೆಂಟ್ಸ್ ಸ್ಥಳ ಪಕ್ಕದ ಖಾಸಗಿ ವ್ಯಕ್ತಿಯಾದ ಯಶೋಚಂದ್ರರವರ ವಶವಿದ್ದು ಆ ಜಾಗವನ್ನು ತೆರವುಗೊಳಿಸಿ ಸೊಸೈಟಿಗೆ ಬಿಟ್ಟುಕೊಡಬೇಕೆಂದು ಸೊಸೈಟಿಯವರು ಕಂದಾಯ ಇಲಾಖೆಗೆ ಬರೆದುಕೊಂಡಿದ್ದ ಹಿನ್ನೆಲೆಯಲ್ಲಿ ಇಂದು ಸರ್ವೆ ನಡೆದು ಅತಿಕ್ರಮಣ ತೆರವುಗೊಳಿಸುತ್ತಿರುವಾಗ ಅತಿಕ್ರಮಣದ ಆರೋಪ ಹೊತ್ತಿರುವ ಯಶೋಚಂದ್ರರವರು ಜೆ.ಸಿ.ಬಿ.ಗೆ ತಡೆ ಒಡ್ಡಿದ ಹಾಗೂ ಇದನ್ನು ಖಂಡಿಸಿ ಊರವರು ಸೊಸೈಟಿಯ ಪರವಾಗಿ ರಸ್ತೆ ತಡೆ ನಡೆಸಿ ನ್ಯಾಯಕ್ಕಾಗಿ ಆಗ್ರಹಿಸಿದ ಘಟನೆ ವರದಿಯಾಗಿದೆ.


ಇಂದು ಬೆಳಿಗ್ಗೆಯಿಂದ ಸಂಜೆಯ ವರೆಗೆ ನಡೆದ ಈ ಘಟನೆಯಿಂದಾಗಿ ಯೇನೆಕಲ್ ನಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.

ಬಳಿಕ ಕಡಬದಿಂದ. ತಹಶೀಲ್ದಾರ್ ಮತ್ತಿತರರು ಬಂದು ಪೋಲೀಸ್ ಉಪಸ್ಥಿತಿಯಲ್ಲಿ ಅತಿಕ್ರಮಿತ 15 ಸೆಂಟ್ಸ್ ಜಾಗವನ್ನು ಖಾಸಗಿಯವರಿಂದ ತೆರವುಗೊಳಿಸಿ ಸೊಸೈಟಿಯ ವಶಕ್ಕೆ ಒಪ್ಪಿಸುವ ಪ್ರಕ್ರಿಯೆ ನಡೆಸಿದರೆಂದು ತಿಳಿದುಬಂದಿದೆ.