ಸುಳ್ಯದಲ್ಲಿ ರಂಜಿಸಿದ ಗೆಜ್ಜೆ ಗಿರಿ ಮೇಳದ ಶ್ರೀ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ ಯಕ್ಷಗಾನ ಬಯಲಾಟ

0

ಸುಳ್ಯ ಯಕ್ಷಗಾನ ಗೆಳೆಯರ ಬಳಗ ಇವರ ಆಶ್ರಯದಲ್ಲಿ ಶ್ರೀ ಆದಿ ದೂಮಾವತಿ ಶ್ರೀದೇಯಿ ಬೈದೆತಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಮೂಲಸ್ಥಾನ ಗೆಜ್ಜೆಗಿರಿ ಮೇಳದವರಿಂದ ಎ.3 ರಂದು ಸುಳ್ಯ ಶ್ರೀ ಚನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ಶ್ರೀ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ ಎಂಬ ಶ್ರೀದೇಯಿ ಬೈದತಿ ಕೋಟಿ ಚೆನ್ನಯರ ಸತ್ಯ ಕಥೆಯನ್ನು ಆಧಾರಿತ ಕಾಲಮಿತಿ ಯಕ್ಷಗಾನ ಬಯಲಾಟವು ಪ್ರದರ್ಶನಗೊಂಡಿತು.

ಯಕ್ಷಗಾನ ಕಲಾವಿದ ಶೇಖರ ಮಣಿಯಾಣಿ ಯವರ ಸಂಯೋಜನೆಯಲ್ಲಿ ಯಕ್ಷಗಾನ ಗೆಳೆಯರ ಬಳಗದ ಸದಸ್ಯರ ಸಹಕಾರದೊಂದಿಗೆ ಯಕ್ಷಗಾನ ಬಯಲಾಟದ ಆಯೋಜನೆ ಮಾಡಲಾಗಿತ್ತು.