ದಿ‌.ಎನ್.ಎಂ.ಬಾಲಕೃಷ್ಣ ಗೌಡರ ಜನ್ಮ ದಿನಾಚರಣೆ – ಪುತ್ಥಳಿಗೆ ಮಾಲಾರ್ಪಣೆ

0

ಕೊಡುಗೈದಾನಿ ದಿ.ಬಾಲಕೃಷ್ಣ ಗೌಡರ ನೆನಪು ಶಾಶ್ವತ – ಎಸ್.ಎನ್.ಮನ್ಮಥ

ಧಾರ್ಮಿಕ,ಸಾಮಾಜಿಕ, ಶೈಕ್ಷಣಿಕ,ರಾಜಕೀಯ ಕ್ಷೇತ್ರದಲ್ಲಿ ಅಪಾರ ಸಾಧನೆಗೈದು ತಾಲೂಕಿನ ಸಮಗ್ರ ಅಭಿವೃದ್ಧಿಗೆ ಕಾರಣರಾಗಿದ್ದ, ಕೊಡುಗೈದಾನಿಯೂ ಆಗಿದ್ದ ಪಾಲೆಪ್ಪಾಡಿ ದಿ.ಎನ್.ಎಂ.ಬಾಲಕೃಷ್ಣ ಗೌಡರ 96 ನೇ ಜನ್ಮದಿನಾಚರಣೆಯನ್ನು ಎ.11ರಂದು ಆಚರಿಸಲಾಯಿತು.


ದಿ.ಎನ್.ಎಂ.ಬಾಲಕೃಷ್ಣ ಗೌಡರ ಪುತ್ರಿ ಶ್ರೀಮತಿ ಜ್ಯೋತ್ಸ್ನಾ ಪಾಲೆಪ್ಪಾಡಿ ಬಾಲಕೃಷ್ಣ ಗೌಡರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಸ್.ಎನ್.ಮನ್ಮಥ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.


ಈ ಸಂದರ್ಭದಲ್ಲಿ ಹಿರಿಯರಾದ ಮಾಧವ ಭಟ್ ಶೃಂಗೇರಿ,ಕೃಷ್ಣಪ್ಪ ಗೌಡ ನೆಕ್ರೆಪ್ಪಾಡಿ, ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಕೀಲಾಡಿ,ಉಪಾಧ್ಯಕ್ಷೆ ಶ್ರೀಮತಿ ಸುಜಾತ ಪವಿತ್ರಮಜಲು, ಸಹಕಾರಿ ಸಂಘದ ನಿರ್ದೇಶಕರಾದ ಕುಸುಮಾಧರ ಎಂ.ಸಿ, ವಾಸುದೇವ ನಿಡುಬೆ,ಚಂದ್ರಶೇಖರ ಕೊಯಿಲ,ಮಹೇಶ ಜಬಳೆ, ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ರವಿಪ್ರಸಾದ್ ಸಿ.ಕೆ, ರವಿನಾಥ ಎಂ.ಎಸ್, ಶೇಖರ ಮಡ್ತಿಲ, ಶಾಂತಾರಾಮ ಕಣಿಲೆಗುಂಡಿ,ಅಚ್ಚುತ, ರಾಜೇಂದ್ರ ಪಾತಿಕಲ್ಲು,ರವಿರಾಜ್ ಪೂಜಾರಿಮನೆ,ಭೋಜಪ್ಪ ಗೌಡ ಹಾಗೂ ಮತ್ತಿತರರು ಉಪಸ್ಥಿತರಿದ್ದರು.