ನಾಲ್ಕೂರು : ಮರ ಬಿದ್ದು ದನದ ಕೊಟ್ಟಿಗೆ ಸೇರಿ ಉಪಕಟ್ಟಡ ನೆಲಸಮ

0

ಜು. 23 ರಂದು ಸಂಜೆ ಬೀಸಿದ ಬಾರಿ ಗಾಳಿಗೆ ನಾಲ್ಕೂರು ಗ್ರಾಮದ ಮುಗುಪು ಮನೆ ಚೆನ್ನಪ್ಪ ಗೌಡರವರ ದನದ ಕೊಟ್ಟಿಗೆಗೆ ಹಾಗೂ ಅಡುಗೆ ಮಾಡುವ ಉಪಕಟ್ಟಡ ಸಂಪೂರ್ಣ ನೆಲಸಮಗೊಂಡಿದೆ.

ಮನೆಯ ಬಳಿ ಇದ್ದ ಬೃಹತ್ ಗಾತ್ರದ ಕಿರಲ್ ಭೊಗಿ ಮರ ಬುಡ ಸಮೇತ ತುಂಡಾಗಿ ಬಿದ್ದ ಕಾರಣ ದನದ ಕೊಟ್ಟಿಗೆ ಹಾಗೂ ಅಡುಗೆ ಮಾಡುವ ಉಪ ಕಟ್ಟಡ ಸಂಪೂರ್ಣ ಹಾನಿಗೊಂಡಿದೆ.

ಕೊಟ್ಟಿಗೆಯಲ್ಲಿದ್ದ ಒಂದು ದನ ಅವಶೇಷದಡಿಯಲ್ಲಿ ಸಿಲುಕಿ ಪ್ರಾಣಾಪಾಯದಿಂದ ಪಾರಾಗಿದೆ.ಈ ಬಗ್ಗೆ ಚೆನ್ನಪ್ಪ ಗೌಡರವರು ಅರಣ್ಯಾಧಿಕಾರಿಗಳಿಗೆ ಹಾಗೂ ಕಂದಾಯ ಅಧಿಕಾರಿಗಳಿಗೆ ಮೆಸ್ಕಾಂ ಇಲಾಖೆಯವರಿಗೆ ಮಾಹಿತಿ ನೀಡಿದ್ದಾರೆ.

ಮನೆಯ ಛಾವಣಿಗೂ ಹಾನಿಯಾಗಿದೆ.ಅರಣ್ಯ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಧಾವಿಸಿದ್ದು ಪರಿಹಾರಕ್ಕಾಗಿ ಕ್ರಮಕೈಗೊಂಡಿದ್ದಾರೆ.

ವರದಿ.ಡಿ.ಹೆಚ್