ಹರಿಹರ ಪಲ್ಲತಡ್ಕ – ಮಲೆಯಾಳ ರಸ್ತೆ ಡಾಮರೀಕರಣ ಪೂರ್ಣ

0

ಮಾಜಿ ಸಚಿವ ಎಸ್. ಅಂಗಾರರಿಂದ ರಸ್ತೆ ಉದ್ಘಾಟನೆ

ಮಲೆಯಾಳ ಐನೆಕಿದು ಹರಿಹರ ಪಲ್ಲತಡ್ಕ ಸಂಪರ್ಕ ರಸ್ತೆ ಡಾಮರೀಕರಣ ವಾಗಿದ್ದು ಮಾಜಿ ಸಚಿವ ಎಸ್ ಅಂಗಾರ ಜೂ.15 ರಂದು ಉದ್ಘಾಟಿಸಿದರು.

ಈ ಸಂದರ್ಭ ಸುಳ್ಯದ ಶಾಸಕಿ ಭಾಗೀರಥಿ ಮುರುಳ್ಯ, ಸುಬ್ರಹ್ಮಣ್ಯ ಗ್ರಾ.ಪಂ ಅಧ್ಯಕ್ಷೆ ಲಲಿತಾ ಗುಂಡಡ್ಕ, ಹರೀಶ್ ಕಂಜಿಪಿಲಿ, ಕಿಶೋರ್ ಕುಮಾರ್ ಕೂಜುಗೋಡು, ವೆಂಕಟ್ ದಂಬೆಕೋಡಿ, ವೆಂಕಟ್ ವಳಲಂಬೆ, ಶಿವಪ್ರಸಾದ್ ನಡುತೋಟ, ಜಯಪ್ರಕಾಶ್ ಕೂಜುಗೋಡು, ಚಂದ್ರಹಾಸ ಶಿವಾಲ, ಹಿಮ್ಮತ್ ಕೆ.ಸಿ, ವಿಜಯ ಅಂಕಣ, ಗಿರೀಶ್ ಆಚಾರ್ಯ, ನವೀನ್ ಕಟ್ರಮನೆ, ರಾಜೇಶ್ ಎನ್ ಎಸ್ ಮತ್ತಿತರರು ಉಪಸ್ಥಿತರಿದ್ದರು. ರಸ್ತೆ ಉದ್ಘಾಟನೆ ಬಳಿಕ ಸಭಾ ಕಾರ್ಯಕ್ರಮ ನಡೆದಿದ್ದು ಈ ಸಂದರ್ಭ ಮಾಜಿ ಸಚಿವ ಎಸ್ ಅಂಗಾರ, ಹಾಲಿ ಶಾಸಕಿ ಭಾಗೀರಥಿ, ರಸ್ತೆಯ ಕಂಟ್ರಾಕ್ಟರ್ ಹರೀಶ್, ಇಂಜಿನಿಯರ್ ಪರಮೇಶ್ವರ ಅವರುಗಳನ್ನು ಸನ್ಮಾನಿಸಲಾಯಿತು.