ಸಾಮಾಜಿಕ ಜಾಲತಾಣದಲ್ಲಿ ನಿಂದನೆಯ ಆರೋಪ

0

ಸಚಿನ್ ರಾಜ್ ಶೆಟ್ಟಿ ಮತ್ತು ಭವಾನಿಶಂಕರ್ ಮೇಲೆ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣಪ್ಪರಿಂದ ಪೋಲೀಸ್ ದೂರು

ಸಾಮಾಜಿಕ ಜಾಲತಾಣದಲ್ಲಿ ನಿಂದನೆ ಹಾಗೂ ಸುಳ್ಯಕ್ಕೆ ಬರದಂತೆ ಬೆದರಿಕೆ ಒಡ್ಡಿದ್ದಾರೆಂದು ಉಚ್ಛಾಟಿತ ಕಾಂಗ್ರೆಸ್ ಮುಖಂಡರುಗಳಾದ ಸಚಿನ್ ರಾಜ್ ಶೆಟ್ಟಿ ಹಾಗೂ ಭವಾನಿಶಂಕರ್ ಕಲ್ಮಡ್ಕ ರವರ ಮೇಲೆ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಜಿ.ಕೃಷ್ಣಪ್ಪರವರು ಕಡಬ ಪೋಲೀಸರಿಗೆ ದೂರು ನೀಡಿದ್ದಾರೆ.

ದುರಹಂಕಾರಿ ಕೃಷ್ಣಪ್ಪ ಎಂದು, ಕೃಷ್ಣಪ್ಪ ಹಠಾವೊ, ಕಾಂಗ್ರೆಸ್ ಬಚಾವೋ ಎಂದೂ ವೈಯಕ್ತಿಕ ನಿಂದನೆಯ ಬರಹಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಿದ್ದಾರೆ. ಹಾಗೂ ಸುಳ್ಯಕ್ಕೆ ಬರಲು ಬಿಡುವುದಿಲ್ಲ ಎಂದು ಬೆದರಿಕೆ ಒಡ್ಡಿದ್ದಾರೆ ಎಂದು ಕೃಷ್ಣಪ್ಪರು ನೀಡಿದ ದೂರಿನಲ್ಲಿ ಭವಾನಿಶಂಕರ ಮತ್ತು ಸಚಿನ್ ರಾಜ್ ಶೆಟ್ಟಿಯವರ ಮೇಲೆ ಆರೋಪ ಹೊರಿಸಿದ್ದಾರೆ.
ಆರೋಪಕ್ಕೆ ಪೂರಕವಾದ ಸಾಕ್ಷಾಧಾರಗಳನ್ನು ದೂರಿನೊಂದಿಗೆ ಅವರು ಸಲ್ಲಿಸಿರುವುದಾಗಿ ತಿಳಿದು ಬಂದಿದೆ.