ಉತ್ತರ ಕರ್ನಾಟಕ ವುಮೆನ್ಸ್ ಫೌಂಡೇಶನ್ ಕ್ರೀಡಾಕೂಟದಲ್ಲಿ ಶ್ರೀಮತಿ ವಿದ್ಯಾ ಹರೀಶ್ ಅವರಿಗೆ ಚಿನ್ನ ಮತ್ತು ಬೆಳ್ಳಿ ಪದಕ

0

ಪೆರಾಜೆ ಗ್ರಾಮದ ಬಂಗಾರಕೋಡಿಯ ಶ್ರೀಮತಿ ವಿದ್ಯಾ ಹರೀಶ್ ಅವರಿಗೆ ಹುಬ್ಬಳ್ಳಿಯಲ್ಲಿ ಜರುಗಿದ ಉತ್ತರ ಕರ್ನಾಟಕ ವುಮೆನ್ಸ್ ಫೌಂಡೇಶನ್ ಕ್ರೀಡಾಕೂಟದಲ್ಲಿ ಚಿನ್ನ ಮತ್ತು ಬೆಳ್ಳಿಪದಕ ದೊರೆತಿದೆ.


ಹುಬ್ಬಳ್ಳಿಯಲ್ಲಿ ನಡೆದ ಉತ್ತರ ಕರ್ನಾಟಕ ವುಮೆನ್ಸ್ ಫೌಂಡೇಶನ್ ಕ್ರೀಡಾಕೂಟದ ನೂರು ಮೀಟರ್ ಮತ್ತು ಇನ್ನೂರು ಮೀಟರ್ ಓಟದ ಸ್ಪರ್ಧೆಯಲ್ಲಿ ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಸ್ಥಾನಗಳಿಸಿದ ಶ್ರೀಮತಿ ವಿದ್ಯಾ ಹರೀಶ್ ಅವರು ಚಿನ್ನ ಮತ್ತು ಬೆಳ್ಳಿಯ ಪದಕವನ್ನು ಪಡೆದುಕೊಂಡಿದ್ದಾರೆ.


ಈಕೆ ಪೆರಾಜೆ ಗ್ರಾಮದ ಬಂಗಾರಕೋಡಿ ಹರೀಶ್ ಅವರ ಪತ್ನಿಯಾಗಿದ್ದು, ಆಲೆಟ್ಟಿ ಗ್ರಾಮದ ರಂಗತ್ತಮಲೆಯ ಆರ್. ಕೂಸಪ್ಪ ಗೌಡ ಹಾಗೂ ಶ್ರೀಮತಿ ಸಣ್ಣಮ್ಮ ದಂಪತಿಗಳ ಪುತ್ರಿ.