ಉಚ್ಛಾಟನೆ ಮತ್ತು ಶೋಕಾಸ್ ನೋಟೀಸ್ ಪಡೆದ ಕಾಂಗ್ರೆಸ್ ಮುಖಂಡರಿಂದ ಕೆಪಿಸಿಸಿ ಶಿಸ್ತುಪಾಲನ ಸಮಿತಿ ಅಧ್ಯಕ್ಷ ರೆಹಮಾನ್ ಖಾನ್ ಭೇಟಿ*

0

*ಮುಖಂಡರಿಗೆ ಡಾ. ರಘು ಸಾಥ್: ಡಿ.ಕೆ.ಶಿವಕುಮಾರ್ ರನ್ನೂ ಭೇಟಿ ಮಾಡಿದ ನಿಯೋಗ*

ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಯ ಬಳಿಕ ನಡೆದ ಬೆಳವಣಿಗೆಯಲ್ಲಿ ಉಚ್ಛಾಟನೆ ಮತ್ತು ಶೋಕಾಸ್ ನೋಟೀಸ್ ಪಡೆದ ಸುಳ್ಯ ಮತ್ತು ಕಡಬದ ಪ್ ನಾಯಕರು ಕೆಪಿಸಿಸಿ ಅಧ್ಯಕ್ಷ ಡಿ. ಕೆ . ಶಿವಕುಮಾರ್ ಮತ್ತು ಶಿಸ್ತು ಪಾಲನ ಸಮಿತಿ ಅಧ್ಯಕ್ಷ ರೆಹಮಾನ್ ಖಾನ್ ರವರನ್ನು ಜೂನ್ 21ರಂದು ಭೇಟಿ ಮಾಡಿರುವುದಾಗಿ ತಿಳಿದು ಬಂದಿದೆ.

ಇಲ್ಲಿನ ಸ್ಥಿತಿಯ ಕುರಿತು ಕೆಪಿಸಿಸಿ ರೆಹಮಾನ್ ಖಾನ್ ರವರ ಬಳಿ ಇವರು ವಿವರಿಸಿದ್ದಾರೆಂದು ತಿಳಿದುಬಂದಿದೆ.ಈ ಸಂದರ್ಭದಲ್ಲಿ ಕೆಪಿಸಿಸಿ ಸಂಯೋಜಕರಾದ ಹೆಚ್ ಎಂ ನಂದಕುಮಾರ್, ಮಾಜಿ ಕೆಪಿಸಿಸಿ ಸದಸ್ಯ, ಡಾ. ರಘು,ವಮುಖಂಡರುಗಳಾದ ಪ್ರವೀಣ್ ಕುಮಾರ್ ಕೆಡೆಂಜಿಗುತ್ತು,ಕೆ ಗೋಕುಲ್ ದಾಸ್, ಸಚಿನ್ ರಾಜ್ ಶೆಟ್ಟಿ ಪೆರುವಾಜೆ,ಉಷಾ ಅಂಚನ್, ಆಶಾ ಲಕ್ಷ್ಮಣ್, ಭವಾನಿಶಂಕರ್ ಕಲ್ಮಡ್ಕ, ಶಶಿಧರ್ ಎಂ ಜೆ, ಚೇತನ್ ಕಜೆಗದ್ದೆ, ಸುಧೀರ್ ದೇವಾಡಿಗ, ಫೈಜಲ್ ಕಡಬ, ಶಹೀದ್ ಪಾರೆ ಮೊದಲಾದವರು ಉಪಸ್ಥಿತರಿದ್ದರು.