ಸುಬ್ರಹ್ಮಣ್ಯದಲ್ಲಿ ಅರುಣ್ ಕುಮಾರ್ ಪುತ್ತಿಲರ ಮೆರವಣಿಗೆ

0

ಹರ್ಷ ವ್ಯಕ್ತಪಡಿಸಿದ ಅಭಿಮಾನಿಗಳು

ಅರುಣ್ ಕುಮಾರ್ ಪುತ್ತಿಲ ಅವರು ಇಂದು ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದ್ದು ಸುಬ್ರಹ್ಮಣ್ಯದ ಪುತ್ತಿಲ ಪರಿವಾರ ಅಭಿಮಾನಿಗಳು ಅವರು ಸ್ವಾಗತಿಸಿ ಸಾರ್ವಜನಿಕ ಸಭೆ ನಡೆಸಿದರು.

ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಮುಂಭಾಗದಿಂದ ಮೆರವಣಿಗೆಯಲ್ಲಿ ಸಾಗಿ ವನದುರ್ಗಾ ದೇವಿ ದೇವಸ್ಥಾನದ ಬಳಿ ಸಾರ್ವಜನಿಕ ಸಭೆ ನಡೆಸಲಾಯಿತು.

ವೇದಿಕೆಯಲ್ಲಿ ಅರುಣ್ ಕುಮಾರ್ ಪುತ್ತಿಲ, ಉದ್ಯಮಿ ಹರೀಶ್ ಕಾಮತ್, ಪುತ್ತಿಲ ಪರಿವಾರದ ರಾಜೇಶ್ ಶೆಟ್ಟಿ, ಕಿರಣ್ ಕುಮಾರ್, ಅಶೋಕ್ ಏನೆಕಲ್ಲು ಉಪಸ್ಥಿತರಿದ್ದರು. ವಿಖ್ಯಾತ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಅಶೋಕ್ ಏನೆಕಲ್ಲು ವಂದನಾರ್ಪಣೆ ಮಾಡಿದರು.