ಗುತ್ತಿಗಾರು: ಚರ್ಚ್ ನಲ್ಲಿ ಮಣಿಪುರದಲ್ಲಿ ಶಾಂತಿ ನೆಲಸಲು ಪ್ರಾರ್ಥನೆ

0

ಸಂಟ್ ಮೇರಿಸ್ ಚರ್ಚ್ ಗುತ್ತಿಗಾರು ಇಲ್ಲಿ ಕಿರಿಯ ಕುಸುಮ ತಂಡದ ಮಕ್ಕಳಿಂದ ಪ್ರಾರ್ಥನೆ ಮತ್ತು ಜಪಮಾಲೆ ರ್ಯಾಲಿ ಇಂದು ನಡೆಸಲಾಯಿತ್ತು.

ಕಳದ 50 ದಿನಗಳಿಂದ ಮಣಿಪುರದಲ್ಲಿ ಉಂಟಾಗಿರುವ ಗಲಭೆಯಲ್ಲಿ ಅನೇಕರು ಪ್ರಾಣ ಕಳದಿರುವುದು, ಹಾಗೂ ತಮ್ಮ ಗ್ರಾಮಗಳನ್ನು ಬಿಟ್ಟು ಓಡಿ ಹೋಗಿರುವುದು ತುಂಬಾ ಬೇಸರದ ವಿಷಯವಾಗಿರುವ ಸಂಗತಿಯಾಗಿದ್ದು ಇದಕ್ಕಾಗಿ ಗುತ್ತಿಗಾರು ಕಿರಿಯ ಕುಸುಮ ತಂಡದ ಮಕ್ಕಳು ಮಣಿಪುರದಲ್ಲಿ ಆದಷ್ಟು ಬೇಗ ಶಾಂತಿ ನೆಲಸಲಿ ಎಂದು ಮಕ್ಕಳು ಒಟ್ಟು ಸೇರಿ ಪ್ರಾರ್ಥಿಸಿದರು. ಕಿರಿಯ ಕುಸುಮ ತಂಡದ ಅಧ್ಯಕ್ಷರಾದ ಮಾಸ್ಟರ್ ಅಖಿಲ್ ಜೋಬಿ ಹಾಗೂ ಸಂಡೆ ಸ್ಕೂಲ್ ನಾಯಕಿ ಮೆರಿನ್ ನೇತೃತ್ವದ ವಹಿಸಿದರು. ಪ್ರಧಾನ ಅದ್ಯಾಪಕಿ ಶ್ರೀಮತಿ ಬೀನ ಬಿಟ್ಟಿ ಹಾಗೂ ಅಧ್ಯಾಪಕರು ಮಾರ್ಗದರ್ಶನ ನೀಡಿದರು.