ಹಳೆಗೇಟು ಸಾಂಸ್ಕೃತಿಕ ಸಂಘದಿಂದ ಜಯಂತ್ ಶೆಟ್ಟಿ ಯವರಿಗೆ ಶ್ರದ್ಧಾಂಜಲಿ ಸಭೆ

0

ಸಾಂಸ್ಕೃತಿಕ ಸಂಘ ಸುಳ್ಯ ಇದರ ಸಕ್ರೀಯ ಸದಸ್ಯ ಜಯಂತ್ ಶೆಟ್ಟಿ, ಕೇರ್ಪಳ ಇತ್ತೀಚೆಗೆ ನಿಧನರಾಗಿದ್ದು ಇವರ ಶ್ರದ್ಧಾಂಜಲಿ ಸಭೆಯು ಜು.1 ರಂದು ಸಂಘದ ಅಧ್ಯಕ್ಷ ಶ್ರೀನಿವಾಸ್ ರಾವ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಹಾಗೆಯೇ ಇತ್ತೀಚೆಗೆ ನಿಧನ ಹೊಂದಿದ ಚಿದಾನಂದ ಗೌಡ, ಬೀರಮಂಗಲ ಇವರಿಗೂ ಶ್ರದ್ಧಾಂಜಲಿ ಸಲ್ಲಿಸಲಾಯಿತು.


ಈ ಸಂದರ್ಭದಲ್ಲಿ ಕಾರ್ಯದರ್ಶಿ ಶಿವನಾಥ್ ರಾವ್, ಉಪಾಧ್ಯಕ್ಷ ಬಾಲಗೋಪಾಲ. ಎಂ, ನಗರ ಪಂಚಾಯತ್ ಸದಸ್ಯ ಬುದ್ಧ ನಾಯ್ಕ, ಸದಸ್ಯರುಗಳಾದ ರಾಕೇಶ್ ಕುಂಟಿಕಾನ, ಅರುಣ್ ರಾವ್ , ಗಣೇಶ್ ಕೊಯಿಂಗೋಡಿ, ಜಗದೀಶ್, ಸಚಿನ್ ರಾವ್, ವಿಜಯ್ ಕುಮಾರ್ ಮತ್ತಿತ್ತರರು ಹಾಜರಿದ್ದರು.